ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಮಹಿಳೆಯ ಸರವನ್ನು ಕದ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿತ್ತು. ಈ ಘಟನೆಯ ತನಿಖೆಯನ್ನು ಮಾಡುವಾಗ ಊಹೆ ಮಾಡಲು ಅಸಾಧ್ಯವಾದಂತಹ ಒಂದು ರೋಚಕ ಪ್ರಕರಣ ಇದರ ಹಿಂದಿರುವುದು ಬೆಳಕಿಗೆ ಬಂದಿದೆ.


ಚಿಕ್ಕಬಳ್ಳಾಪುರದ ಬಾಪೂಜಿ ನಗರದ ನರಸಿಂಹಮೂರ್ತಿಯವರ ಮನೆಯಲ್ಲಿ ಮೇ 28 ರಂದು ಆತನ ಸೊಸೆ ಪುಷ್ಪಲತಾಳನ್ನ (23) ಕತ್ತು ಕೊಯ್ದು ಕೊಲೆ ಮಾಡಿದಂತೆ ಶವ ಪತ್ತೆಯಾಗಿತ್ತು. ಪುಷ್ಪಲತಾಳ ಜೊತೆಗಿದ್ದ ಆಕೆಯ ನಾದಿನಿ ಭವ್ಯಾ, ಯಾರೋ ಬಂದು ಆಗ್ತಿಗೆಯನ್ನ ಕೊಂದು ಆಕೆಯ ಕತ್ತಿನ ಚಿನ್ನದ (Gold) ಸರ ಕಿತ್ಕೊಂಡು ಹೋದ್ರು. ನನಗೆ ಸ್ಪ್ರೇ ಹೊಡೆದ್ರು ನಾನು ತಲೆ ಸುತ್ತಿ ಬಿದ್ದು ಹೋಗಿದ್ದೆ. ಅಂತ ಹೇಳಿಕೆ ನೀಡಿದ್ದಳು.
ಕೊನೆಗೆ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸ್ರಿಗೆ ದೊಡ್ಡ ಆಘಾತ ಕಾದಿತ್ತು. ಅದೇನೆಂದರೆ ಅತ್ತಿಗೆಯನ್ನು ಕೊಂದಿರುವುದು ಬೇರೆ ಯಾರು ಅಲ್ಲ, ನಾದಿನಿ ಭವ್ಯಾಳೆ ಅನ್ನೋದು ಗೊತ್ತಾಗಿದೆ. ಅತ್ತಿಗೆಯ ಚಿನ್ನಾಭರಣ ಕಳ್ಳತನ ಮಾಡಲು ಹೊಸಕೋಟೆ ಮೂಲದ ಸಹೋದರ ಸಂಬಂಧಿ ಲೋಹಿತ್ ಅಲಿಯಾಸ್ ಲಲ್ಲು ಜೊತೆ ಸೇರಿ ಕೊಲೆ ಮಾಡಿರೋದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.
ಪೊಲೀಸರು, ಮೃತಳ ನಾದಿನಿ ಭವ್ಯಾ ಹಾಗೂ ಆಕೆಯ ಸಹೋದರ ಸಂಬಂಧಿ ಹೊಸಕೋಟೆ ಮೂಲದ ಲೋಹಿತ್ ಕುಮಾರ್ ಅಲಿಯಾಸ್ ಲುಲ್ಲು ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಭವ್ಯಾ ಮದುವೆ ಆಗಿದ್ರೂ ತನ್ನ ಬಾಯ್ಫ್ರೆಂಡ್ ಜೊತೆ ಸಂಬಂಧ ಹೊಂದಿದ್ದಳಂತೆ. ಅದೇ ವಿಡಿಯೋಗಳನ್ನ ಇಟ್ಟುಕೊಂಡು ಬಾಯ್ ಫ್ರೆಂಡ್ ಬ್ಲಾಕ್ ಮೇಲ್ ಮಾಡ್ತಿದ್ದಾನಂತೆ. ಹೀಗಾಗಿ ಬಾಯ್ ಫ್ರೆಂಡ್ ಗೆ ವಾರ್ನಿಂಗ್ ಕೊಟ್ಟು ಬುದ್ಧಿ ಕಲಿಸು ಅಂತ ಖಾಸಗಿ ವಿಡಿಯೊಗಳನ್ನು ಲೋಹಿತ್ಗೆ ಕಳಿಸಿದ್ದಳಂತೆ. ಆದ್ರೆ ಲೋಹಿತ್ ಅದೇ ವಿಡಿಯೋ ಗಳನ್ನ ಇಟ್ಟುಕೊಂಡು ಭವ್ಯಾಗೆ ಬ್ಲಾಕ್ ಮೇಲ್ ಮಾಡಿದ್ದಾನೆ.
ಕೊನೆಗೆ 2-3 ಬಾರಿ ಲಕ್ಷ ಲಕ್ಷ ಹಣ ಕೊಟ್ಟಿದ್ದ ಭವ್ಯ ಬಳಿ ಮತ್ತೆ ಹಣ ಇರಲಿಲ್ಲ. ಇದ್ರಿಂದ ಆತನಿಗೆ ಮತ್ತೆ ಹಣ ಕೊಡಲು ಅತ್ತಿಗೆಯ ಚಿನ್ನಾಭರಣವನ್ನೇ ಕದ್ದುಕೊಂಡು ಹೋಗು ನಾನು ಹೆಲ್ಪ್ ಮಾಡ್ತೀನಿ ಅಂತ ಮನೆಗೆ ಕರೆಸಿಕೊಂಡಿದ್ದಾಳೆ. ಮನೆಯಲ್ಲಿ ಎಲ್ಲರೂ ಟ್ರಿಪ್ಗೆ ಅಂತ ಹೋಗಿದ್ದಾಗ ಲೋಹಿತ್ನನ್ನು ಮನೆಗೆ ಕರೆಸಿಕೊಂಡು ಪುಷ್ಪಲತಾಳ ಸರ ಚಿನ್ನಾಭರಣ ದೋಚುವ ಸಂಚು ಮಾಡಿದ್ದಾರೆ. ಆಕೆ ಬದುಕಿದ್ರೆ ತಮಗೆ ಕಷ್ಟ ಅಂತ ತಿಳಿದು ಪುಷ್ಪಲತಾಳನ್ನ ದಿಂಬಿ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಕತ್ತಿನಲ್ಲಿದ್ದ ಸರ ಕಿವಿ ಓಲೆ ಕದ್ದಿದ್ದಾರೆ. ಇಷ್ಟೇ ಅಲ್ಲದೆ ಇನ್ನು ಶಾಕಿಂಗ್ ವಿಚಾರವೆಂದರೆ ಈ ಎಲ್ಲಾ ಘಟನೆ ನಡೆಯಲು ಭವ್ಯಳ ಅಜ್ಜಿ ಮತ್ತು ತಾಯಿ ಸಾತ್ ನೀಡಿದ್ದಾರೆ ಎನ್ನಲಾಗಿದೆ.

