Pramod mutalik: ಚೈತ್ರಾ ಕುಂದಾಪುರ ಪರ ಬ್ಯಾಟ್ ಬೀಸಿದ ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ !! ಭಾರೀ ಅಚ್ಚರಿ ಮೂಡಿಸಿದ ಹಿಂದೂ ಹುಲಿಯ ಹೇಳಿಕೆ.

Political news there is a conspiracy behind chaitra kundapura case says Pramod muthalik

Pramod mutalik: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು MLA ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿರುವ ಆರೋಪದ ಮೇಲೆ ಚೈತ್ರಾ ಕುಂದಾಪುರ ಹಾಗೂ ಆಕೆಯ ಗ್ಯಾಂಗ್ ಸದ್ಯ ಪೋಲೀಸರ ಅತಿಥಿಯಾಗಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod mutalik) ಮೌನ ಮುರಿದಿದ್ದಾರೆ.

ಹೌದು, ಉದ್ಯಮಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿರುವ ಆರೋಪದಲ್ಲಿ ಜೈಲುಪಾಲಾಗಿರುವ ಹಿಂದೂ ಕಾರ್ಯಕರ್ತೆ ಮಿಸ್​​ ಚೈತ್ರಾ ಕುಂದಾಪುರ ( Chaitra Kundapura) ಪ್ರಕರಣದ ಕುರಿತು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Sri Ram Sena chief Pramod Muthalik ) ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಅಚ್ಚರಿ ಎಂಬಂತೆ ಮುತಾಲಿಕ್ ಅವರು ಚೈತ್ರಾ ಕುರಿತು ಭರ್ಜರಿ ಬ್ಯಾಟ್ ಬೀಸಿದ್ದಾರೆ. ಸದ್ಯ ಪ್ರಮೋದ್ ಮುತಾಲಿಕ್ ನಡೆ ಭಾರೀಅಚ್ಚರಿ ಮೂಡಿಸಿದೆ.

ಅಂದಹಾಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು ಹಿಂದೂ ಕಾರ್ಯಕರ್ತರನ್ನು ಕಾಂಗ್ರೆಸ್‌ನವರು ಸಿಲುಕಿ ಹಾಕಿಸುತ್ತಿದ್ದಾರೆ. ಕಾಂಗ್ರೆಸ್‌ನವರೇ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದಿದ್ದರು. ಮತಾಂತರ, ಗೋಹತ್ಯೆ ಕಾನೂನು ವಾಪಸ್ ಪಡೆದುಕೊಳ್ಳುತ್ತೇವೆ ಎಂದಿದ್ದರು. ಈ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದರು. ಬಜರಂಗದಳ ಒಂದು ನೆಪ ಮಾತ್ರ. ಹಿಂದೂ ಸಂಘಟನೆಗಳನ್ನು ಬ್ಯಾನ್ ಮಾಡುವ ವಿಚಾರ ಅವರದ್ದಾಗಿದೆ ಹೀಗಾಗಿ ಚೈತ್ರಾ ಕುಂದಾಪುರ ಬಂಧನದ ಹಿಂದೆ ಷಡ್ಯಂತ್ರವಿದೆ. ಅವರು ಯಾವುದೋ ಷಡ್ಯಂತ್ರಕ್ಕೆ ಸಿಲುಕಿದ್ದಾರೆ. ಅವರು ನಿರ್ದೋಷಿಯಾಗಿ ಹೊರಗೆ ಬರ್ತಾರೆ ಎಂದು ಚೈತ್ರಾ ಪರ ಭರ್ಜರಿಯಾಗೇ ಬ್ಯಾಟ್ ಬೀಸಿದ್ದಾರೆ.

ಜೊತೆಗೆ ಏನು ಷಡ್ಯಂತ್ರ ಇದೆ ಎಂಬುದರ ಕುರಿತು ಮಾತನಾಡಿದ ಅವರು ಗೋವಿಂದಬಾಬು ಪೂಜಾರಿ ಇಂದಿರಾ ಕ್ಯಾಂಟೀನ್ ಸಂಬಂಧ ಇದು ನಡೆದಿದೆ. ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಕೂಸು. ಇದನ್ನು ಬಿಜೆಪಿಯವರಿಗೆ ಏಕೆ ಟೆಂಡರ್ ಕೊಟ್ಟರು? ಹಾಗಾಗಿ ಇದರ ಹಿಂದೆ ಬೇರೆ ಏನೋ ಇದೆ ಎಂದು ಮುತಾಲಿಕ್ ಅನುಮಾನ ಹೊರಹಾಕಿದ್ದಾರೆ.

ಅಲ್ಲದೆ ಹಾಲಪ್ಪಜ್ಜ ಸ್ವಾಮೀಜಿ ಅವರ ಹೆಸರೂ ಇದರಲ್ಲಿ ಕೇಳಿ ಬಂದಿದೆ. ಅವರನ್ನು ಹತ್ತಿರದಿಂದ ನಾನು ಬಲ್ಲೆ. ಅವರದ್ದೂ ದೊಡ್ಡ ಮಠ, ಅವರೂ ನಿರ್ದೋಷಿಯಾಗಿದ್ದಾರೆ. ವ್ಯವಸ್ಥಿತವಾಗಿ ಸಿಕ್ಕಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿ. ಇದರ ಹಿಂದೆ ಏನೋ ಇದೆ. ಚೈತ್ರಾ ಈ ಕೃತ್ಯ ಮಾಡಿಲ್ಲ ಎಂಬುದು ನನ್ನ ಅಭಿಪ್ರಾಯ. ಅವರು ನಿರ್ದೋಷಿಯಾಗಿ ಹೊರಬರುತ್ತಾರೆ. ಪ್ರಕರಣದ ಕುರಿತು ಸಂಪೂರ್ಣ ತನಿಖೆ ಆಗಲಿ. ಅವರು ತಪ್ಪಿತಸ್ಥರಾಗಿದ್ದರೆ ಶಿಕ್ಷೆಯಾಗಲಿ. ಕೋರ್ಟ್ ಏನು ತೀರ್ಪು ನೀಡುತ್ತದೋ ಅದಕ್ಕೆ ನಾನು ಬದ್ಧ ಎಂದು ಮುತಾಲಿಕ್ ಹೇಳಿದ್ದಾರೆ.

ಇದನ್ನೂ ಓದಿ: Chaitra kundapura: ಉಡುಪಿ-ಚಿಕ್ಕಮಗಳೂರಿನ BJP ಲೋಕಸಭಾ ಅಭ್ಯರ್ಥಿ ನಾನೇ- ಚೈತ್ರಾ ಕುಂದಾಪುರ !!

Leave A Reply

Your email address will not be published.