ಬೆಳ್ತಂಗಡಿ:ಉಜಿರೆಯ ಕಾಮತ್ ಕಂಪೌಂಡ್ ನಲ್ಲಿರುವ ಮನೆಯಲ್ಲಿ ಕಳ್ಳತನ

ಬೆಳ್ತಂಗಡಿ :ಉಜಿರೆಯ ಕಾಮತ್ ಕಂಪೌಂಡ್ ನಲ್ಲಿರುವ ಮಹಾಮಯಾಕೃಪಾ ಮನೆಯಲ್ಲಿ ಯಾರು ಇಲ್ಲವೆಂದು ಖಚಿತ ಪಡಿಸಿಕೊಂಡ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.

ಮನೆಯ ಸದಸ್ಯರೆಲ್ಲರು ಬೆಂಗಳೂರಿನಲ್ಲಿ ವಾಸವಿದ್ದು, ಮನೆಯನ್ನು ಆಗಾಗ ಸಂಬಂಧಿಕರು ಬಂದು
ನೋಡಿಕೊಂಡು ಹೋಗುತ್ತಿದ್ದರು. ಹೀಗಾಗಿ ಮನೆಯಲ್ಲಿ ಯಾರು ಇಲ್ಲ ಎಂದು ತಿಳಿದು ಕಳ್ಳತನಕ್ಕೆ ಹೊಂಚುಹಕಿದ್ದಾರೆ.ಬ್ಯಾಟರಿ ,ಗ್ರಾಂಡರ್ ,ಮಿಕ್ಸಿ ಎರಡು ,ಏಣಿ ಎರಡು, ತ್ರಾಮದ ಪಾತ್ರೆ,ಸ್ಟಿಲ್ ಪಾತ್ರೆಗಳು ಮುಂತಾದ ವಸ್ತುಗಳು ಕಳ್ಳತನವಾಗಿದೆ ಎಂದು ಅಶ್ವಿನಿ ಆರ್ ಕಾಮತ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

Leave A Reply

Your email address will not be published.