Charmady: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ; ಟ್ರಾಫಿಕ್‌ ಜಾಮ್‌

Chikkamagaluru: ಸಿಮೆಂಟ್‌ ಹೇರಿಕೊಂಡು ಹೋಗುತ್ತಿದ್ದ 16 ಚಕ್ರದ ಲಾಯಿಯೊಂದು ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಕೆಟ್ಟು ನಿಂತ ಘಟನೆಯೊಂದು ನಡೆದಿದೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಿಮೆಂಟ್‌ ಲಾರಿ ಕೆಟ್ಟು ನಿಂತಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಮೂಲಕ ಕಿಲೋ ಮೀಟರ್‌ ಗಟ್ಟಲೆ ಟ್ರಾಫಿಕ್‌ ಜಾಮ್‌ ಆಗಿದೆ.

ಇದನ್ನೂ ಓದಿ: Brijesh Chowta: ಕಾಂಗ್ರೆಸ್‌ನ ಗೂಂಡಾಗಿರಿ, ಗೊಡ್ಡು ಬೆದರಿಕೆಗೆ ಬಗ್ಗಲ್ಲ-ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವಂತಿಲ್ಲ. ಆದರೂ ಸವಾರ ಗೊತ್ತಿಲ್ಲದೇ ಬಂದಿದ್ದಾನೆ. ಈಗ ಹತ್ತನೇ ತಿರುವಿನಲ್ಲಿ ಹಿಂದೆಯೂ ಹೋಗದೆ, ಮುಂದೆಯೂ ಹೋಗದೆ ಸಿಲುಕಿಕೊಂಡಿದೆ. ಈ ಕಾರಣದಿಂದ ದಾರಿಯಲ್ಲಿ ಬರುತ್ತಿದ್ದ ಇತರ ವಾಹನ ತಿರುವಿನಲ್ಲಿ ಸಂಚರಿಸಲಾಗದೆ ಸಾಲು ಗಟ್ಟಿ ನಿಂತಿದೆ.

ಇದನ್ನೂ ಓದಿ: Dakshina Kannada: ದಕ್ಷಿಣ ಕನ್ನಡ-ಕೊಡಗು ಗಡಿಭಾಗದಲ್ಲಿ 5ವರ್ಷಗಳ ನಂತರ ನಕ್ಸಲರು ಪ್ರತ್ಯಕ್ಷ

ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಇದ್ದರೂ ಲಾರಿಯನ್ನು ಬಿಟ್ಟಿದ್ದೇಗೆ ಎಂದು ಅಲ್ಲಿನ ಜನರ ಪ್ರಶ್ನೆ. ಸ್ಥಳೀಯರು ಪೊಲೀಸರು ವಿರುದ್ಧ ಅಸಮಾಧಾನಗೊಂಡಿದ್ದಾರೆ.

Leave A Reply

Your email address will not be published.