Dakshina Kannada: ದಕ್ಷಿಣ ಕನ್ನಡ-ಕೊಡಗು ಗಡಿಭಾಗದಲ್ಲಿ 5ವರ್ಷಗಳ ನಂತರ ನಕ್ಸಲರು ಪ್ರತ್ಯಕ್ಷ

Mangaluru (Dakshina Kananda): ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಕ್ಸಲರ (Naxal) ಓಡಾಟ ಮತ್ತೆ ಪ್ರಾರಂಭವಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಐದು ವರ್ಷಗಳ ಬಳಿಕ ನಕ್ಸಲರ ಬೆಳವಣಿಗೆ ಕಂಡು ಬಂದಿದ್ದು, ಕಮಕಲ್ಲು ಬಳಿಯ ಕೂಜಿಮಲೆ ರಬ್ಬರ್‌ ಎಸ್ಟೇಟ್‌ ಬಳಿ ಇರುವ ಅಂಗಡಿಗೆ ಎಂಟು ಜನ ನಕ್ಸಲರು ಬಂದಿದ್ದು, ದಿನಸಿ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: Bigg Boss: ಬಿಗ್‌ಬಾಸ್‌ ಒಟಿಟಿ ಯ ವಿನ್ನರನ್ನು ಅರೆಸ್ಟ್‌ ಮಾಡಿದ ಪೊಲೀಸರು; ಈತನ ಮೇಲಿರುವ ಆರೋಪಗಳೇನು?

ಈ ಕುರಿತು ಪೊಲೀಸರಿಗೆ ಮಾಹಿತಿ ದೊರಕಿದ್ದು, ಶೋಧ ಕಾರ್ಯ ನಡೆತಿದೆ.

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿ ನಕ್ಸಲರು ಕಂಡು ಬಂದಿದ್ದು, ನಕ್ಸಲ್‌ ನಿಗ್ರಹ ಪಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Kolkata: ನಿರ್ಮಾಣ ಹಂತದ ಕಟ್ಟಡ ಕುಸಿತ : 10 ಜನರ ರಕ್ಷಣೆ : ಒಳಗೆ ಸಿಲುಕಿರುವವರಿಗಾಗಿ ಹುಡುಕಾಟ

2012 ರಲ್ಲಿ ಕಾಲೂರು ಗ್ರಾಮದಲ್ಲಿ ನಕ್ಸಲರು ಕಾಣಿಸಿಕೊಂಡಿರುವ ಘಟನೆ ನಡೆದಿತ್ತು. 2018ರ ಫೆಬ್ರವರಿಯಲ್ಲಿ ಸಂಪಾಜೆಗುಡ್ಡೆ ಗದ್ದೆಯಲ್ಲಿ ಕಂಡು ಬಂದಿದ್ದರು. ಈಗ ಲೋಕಸಭೆ ಚುನಾವಣೆ ಹೊತ್ತಲ್ಲಿ ನಕ್ಸಲರ ಓಡಾಟ ಕಂಡು ಬಂದಿದ್ದು, ತನಿಖೆ ಮುಂದುವರಿದಿದೆ.

Leave A Reply

Your email address will not be published.