Karnataka politics: ಬಿಜೆಪಿಯ ಮತ್ತೊಬ್ಬ ಪ್ರಬಲ ನಾಯಕ ಕಾಂಗ್ರೆಸ್ ಸೇರ್ಪಡೆ !! ಕಾಂಗ್ರೆಸ್ ನಿಂದಲೇ ಬಂತು ಬಿಗ್ ಅಪ್ಡೇಟ್

Share the Article

Karnataka politics: ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಪರ್ವಗಳು ಶುರುವಾಗಿವೆ. ಇದೀಗ ಬಿಜೆಪಿ(BJP) ಪ್ರಬಲ ನಾಯಕ, ಮಾಜಿ ಸಚಿವ ಕೆ. ಸಿ ನಾರಾಯಣ ಗೌಡ(KC Narayana Gowda) ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗೆ ಸಾಕಷ್ಟು ಪುಷ್ಠಿ ಸಿಕ್ಕಿದ್ದು, ಈ ಕುರಿತು ಕಾಂಗ್ರೆಸ್(Congress Minister)ಸಚಿವರೇ ಬಿಗ್ ಅಪ್ಡೇಟ್ ನೀಡಿದ್ದಾರೆ.

ಇದನ್ನೂ ಓದಿ: Harish poonja: ತೆರಿಗೆ ಹಂಚಿಕೆ ವಿಚಾರ- ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿವಾದಾತ್ಮಕ ಪೋಸ್ಟ್ ವೈರಲ್ !!

Karnataka Politics

ಹೌದು, ಜೆಡಿಎಸ್(JDS) ಭದ್ರಕೋಟೆ ಮಂಡ್ಯದಲ್ಲಿ ಮೂಲತಃ ಜೆಡಿಎಸ್ ಶಾಸಕನಾಗಿ ಮಿಂಚಿ, ಬಿಜೆಪಿ ಸೇರಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಪರಾಭಾವಗೊಂಡಿರುವ ಕೆ. ಸಿ ನಾರಾಯಣ ಗೌಡ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಬಾರಿ ಸದ್ದು ಮಾಡಿತ್ತು. ಇದೀಗ ಈ ಕುರಿತು ಕಾಂಗ್ರೆಸ್ ಸಚಿವ ಚೆಲುವರಾಯಸ್ವಾಮಿ(Cheluvaraya Swamy) ಬಿಗ್ ಅಪ್ಡೇಟ್ ನೀಡಿದ್ದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ. ಮುಂದಿನ ಹತ್ತು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ನಾರಾಯಣ ಗೌಡರು ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸ್ ಆಗಿದೆ.

Leave A Reply