Karnataka politics: ಬಿಜೆಪಿಯ ಮತ್ತೊಬ್ಬ ಪ್ರಬಲ ನಾಯಕ ಕಾಂಗ್ರೆಸ್ ಸೇರ್ಪಡೆ !! ಕಾಂಗ್ರೆಸ್ ನಿಂದಲೇ ಬಂತು ಬಿಗ್ ಅಪ್ಡೇಟ್
![Karnataka Politics](https://hosakannada.com/wp-content/uploads/2024/02/IMG-20240209-WA0028.jpg)
Karnataka politics: ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಪರ್ವಗಳು ಶುರುವಾಗಿವೆ. ಇದೀಗ ಬಿಜೆಪಿ(BJP) ಪ್ರಬಲ ನಾಯಕ, ಮಾಜಿ ಸಚಿವ ಕೆ. ಸಿ ನಾರಾಯಣ ಗೌಡ(KC Narayana Gowda) ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗೆ ಸಾಕಷ್ಟು ಪುಷ್ಠಿ ಸಿಕ್ಕಿದ್ದು, ಈ ಕುರಿತು ಕಾಂಗ್ರೆಸ್(Congress Minister)ಸಚಿವರೇ ಬಿಗ್ ಅಪ್ಡೇಟ್ ನೀಡಿದ್ದಾರೆ.
![](https://hosakannada.com/wp-content/uploads/2024/07/First.jpeg)
ಇದನ್ನೂ ಓದಿ: Harish poonja: ತೆರಿಗೆ ಹಂಚಿಕೆ ವಿಚಾರ- ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿವಾದಾತ್ಮಕ ಪೋಸ್ಟ್ ವೈರಲ್ !!
![](https://hosakannada.com/wp-content/uploads/2024/07/Middle.jpeg)
ಹೌದು, ಜೆಡಿಎಸ್(JDS) ಭದ್ರಕೋಟೆ ಮಂಡ್ಯದಲ್ಲಿ ಮೂಲತಃ ಜೆಡಿಎಸ್ ಶಾಸಕನಾಗಿ ಮಿಂಚಿ, ಬಿಜೆಪಿ ಸೇರಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಪರಾಭಾವಗೊಂಡಿರುವ ಕೆ. ಸಿ ನಾರಾಯಣ ಗೌಡ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಬಾರಿ ಸದ್ದು ಮಾಡಿತ್ತು. ಇದೀಗ ಈ ಕುರಿತು ಕಾಂಗ್ರೆಸ್ ಸಚಿವ ಚೆಲುವರಾಯಸ್ವಾಮಿ(Cheluvaraya Swamy) ಬಿಗ್ ಅಪ್ಡೇಟ್ ನೀಡಿದ್ದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ. ಮುಂದಿನ ಹತ್ತು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ನಾರಾಯಣ ಗೌಡರು ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸ್ ಆಗಿದೆ.