Ayodhya rama mandira: ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ನೀಡಿದ ಮಸೀದಿ ಜಾಗ ವಾಪಸ್‌ಗೆ ಮುಸ್ಲಿಮರ ಒತ್ತಾಯ!!! ಮತ್ತೊಂದು ವಿವಾದ!

india news Ayodhya rama mandira news caretaker of ayodhya mosque sell land to ram mandir temple trust latest news

Ayodhya rama mandira : ಶ್ರೀ ರಾಮ ಮಂದಿರ ಅಯೋಧ್ಯೆಯಲ್ಲಿ(Ayodhya rama mandira) ನಿರ್ಮಾಣವಾಗುತ್ತಿದ್ದು, 2024ರ ರಲ್ಲಿ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ ಹಲವು ಶತಮಾನಗಳ ಹೋರಾಟದ ನಂತರ ಹಿಂದೂಗಳ ಪವಿತ್ರ ಕ್ಷೇತ್ರದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿದೆ. ಆದರೆ ಇದೀಗ ಹೊಸ ವಿವಾದವೊಂದು ನಿರ್ಮಾಣಗೊಂಡಿದೆ. ಅದೇನೆಂದರೆ ಅಯೋಧ್ಯೆ ರಾಮಮಂದಿರ ಪಕ್ಕದಲ್ಲಿದ್ದ ಮತ್ತೊಂದು ಸ್ಥಳೀಯ ಮಸೀದಿ ಹಾಗೂ ಜಾಗವನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಮಾರಾಟ ಮಾಡಲಾಗಿದೆ ಎಂದು ಆರೋಪ ಬಂದಿದೆ.

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಬಳಿಯ ಮಸೀದಿಯೊಂದರ ಮೇಲ್ವಿಚಾರಕರು ಮಸೀದಿ ಜಾಗವನ್ನು ₹ 30 ಲಕ್ಷಕ್ಕೆ ‘ಮಾರಾಟ’ ಮಾಡಲು ದೇವಸ್ಥಾನದ ಟ್ರಸ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಮುಸ್ಲಿಮರು ಜಿಲ್ಲಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸೆಪ್ಟೆಂಬರ್ 1 ರಂದು ಮಾರಾಟ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದರೂ, ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯ ಮುಸ್ಲಿಂ ಗುಂಪುಗಳು ಈಗ ಮಸೀದಿಯ ಉಸ್ತುವಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ ಮತ್ತು ಒಪ್ಪಂದವನ್ನು ರದ್ದುಗೊಳಿಸುವಂತೆ ಒತ್ತಾಯಿಸಿವೆ.

ಗುರುವಾರ ಮಧ್ಯಾಹ್ನ, ಮುಸ್ಲಿಮರ ನಿಯೋಗವು ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಭೇಟಿ ಮಾಡಿ ಮಸೀದಿ ಉಸ್ತುವಾರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಡುವೆ ನಡೆದ ಮಾರಾಟದ ಒಪ್ಪಂದವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಹಾಗೂ ಜ್ಞಾಪಕ ಪತ್ರವನ್ನು ಹಸ್ತಾಂತರಿಸಿತು.

ಮಸೀದಿ ಬದ್ರ್ ನ ಉಸ್ತುವಾರಿ ಮೊಹಮ್ಮದ್ ರಯೀಸ್ ಅವರು ಒಟ್ಟು ₹30 ಲಕ್ಷಕ್ಕೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದು ₹15 ಲಕ್ಷ ಮುಂಗಡವಾಗಿ ತೆಗೆದುಕೊಂಡಿದ್ದಾರೆ ಎಂದು ಅಜಂ ಖಾದ್ರಿ ಹೇಳಿದರು.

ಈ ಮಸೀದಿಯು ಅಯೋಧ್ಯೆಯ ಮೊಹಲ್ಲಾ ಪಂಜಿ ತೋಲಾದಲ್ಲಿದೆ ಮತ್ತು ಸ್ಥಳೀಯರು ದೈನಂದಿನ ಪ್ರಾರ್ಥನೆಗಾಗಿ ಬಳಸುತ್ತಾರೆ ಎಂದು ಅವರು ಹೇಳಿದ್ದು, ಮಸೀದಿಯು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯಲ್ಲಿ ಯಥಾವತ್ತಾಗಿ ನೋಂದಾಯಿಸಲ್ಪಟ್ಟಿದೆ ಎಂದು ವರದಿಯಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ರಾಮ ಜನ್ಮಭೂಮಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಎಂ ಪಿ ಶುಕ್ಲಾ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಹಿರಿಯ ವಕೀಲ ಅಫ್ತಾಬ್ ಅಹ್ಮದ್, ”ಕೇಂದ್ರ ವಕ್ಫ್ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ವಿವಿಧ ಸಮಯಗಳಲ್ಲಿ ನೀಡಿದ ವಿಭಿನ್ನ ತೀರ್ಪುಗಳ ಪ್ರಕಾರ, ವಕ್ಫ್ ಆಸ್ತಿಗಳನ್ನು ಮಾರಾಟ ಮಾಡಲು, ವರ್ಗಾಯಿಸಲು ಅಥವಾ ಉಡುಗೊರೆಯಾಗಿ ನೀಡಲು ಯಾರಿಗೂ ಹಕ್ಕಿಲ್ಲ.ಅಯೋಧ್ಯೆಯ ‘ಮಸ್ಜಿದ್ ಬದ್ರ್’ ಅನ್ನು ಮಾರಾಟ ಮಾಡುವ ಅಥವಾ ಮಾರಾಟದ ಒಪ್ಪಂದಕ್ಕೆ ಪ್ರವೇಶಿಸಿದವರು ಅಪರಾಧ ಮಾಡಿದ್ದಾರೆ ಮತ್ತು ಅವರ ಕೃತ್ಯಗಳು ಕಾನೂನಿಗೆ ವಿರುದ್ಧವಾಗಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು : ಗಣಪತಿ ಕಟ್ಟೆಯಲ್ಲಿ ಮುಸ್ಲಿಂ ಧ್ವಜ ಹಾರಿಸಿದ ಕಿಡಿಗೇಡಿಗಳು !! ಸ್ಥಳಕ್ಕೆ ಬಂದ ಪೋಲೀಸ್ ಆಫೀಸರ್ ಮಾಡಿದ್ದೇನು ?

Leave A Reply

Your email address will not be published.