UNESCO :ಬೆಳ್ಳಂಬೆಳಿಗ್ಗೆಯೇ ಕನ್ನಡಿಗರಿಗೆ ಸಿಹಿ ಸುದ್ಧಿ ಕೊಟ್ಟ ಯುನೆಸ್ಕೊ- ವಿಶ್ವಪಾರಂಪರಿಕ ಪಟ್ಟಿಗೆ ಕರ್ನಾಟಕದ ಈ ದೇವಾಲಯಗಳು ಸೇರ್ಪಡೆ

Karnataka news hoysala Temple inscribed on UNESCO World Heritage site

UNESCO: ಸಲದ ಜಿ20 ಶೃಂಗಸಭೆಯ(G20) ಆತಿಥ್ಯವನ್ನು ಭಾರತ ವಹಿಸಿದ್ದರಿಂದ ದೇಶಕ್ಕೆ ಹಲವು ಗರಿಮೆಗಳು ಸಂದಾಯವಾಗುತ್ತಿವೆ. ಅದರಲ್ಲೂ ಕರ್ನಾಟಕ(Karnataka) ಕೂಡ ತನ್ನ ಪ್ರಸಿದ್ಧಿ ಸ್ಥಳಗಳಾದ ಬೆಂಗಳೂರು(Bengalore) ಮತ್ತು ಹಂಪಿಯಲ್ಲಿ(Hampi) ಜಿ20ಗೆ ಆತಿಥ್ಯ ವಹಿಸಿತ್ತು. ಸಭೆಗೆ ಬಂದ ಎಲ್ಲಾ ವಿದೇಶಿ ಗಣ್ಯರು ರಾಜ್ಯದ ಈ ಸ್ಥಳಗಳನ್ನು ಹಾಡಿ ಹೊಗಳಿದ್ದರು. ಹೀಗಾಗಿ ಇದೆಲ್ಲದರ ಫಲವೇನೋ ಎಂಬಂತೆ ಇದೀಗ ಕನ್ನಡಿಗರಿಗೆ ಬೆಳ್ಳಂಬೆಳಗ್ಗೆಯೇ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

ಇತ್ತೀಚಿಗಷ್ಟೇ ನಮ್ಮ ರಾಷ್ಟ್ರಗೀತೆ ಬರೆದಿರುವ ಬರೆದಿರುವ ಪಶ್ಚಿಮ ಬಂಗಾಳದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ಶಾಂತಿನಿಕೇತನ ಸಂಸ್ಥೆಯನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಿ ಇಡೀ ಭಾರತೀಯರಿಗೆ ಸಿಹಿ ಸುದ್ಧಿ ನೀಡಿತ್ತು. ಆದರೀಗ ಈ ಬೆನ್ನಲ್ಲೇ ಮತ್ತೆ ಕರ್ನಾಟಕದ ಪ್ರಸಿದ್ಧ ದೇವಾಲಯಗಳಾದ ‘ಹೊಯ್ಸಳ ದೇವಾಲಯ ಸಮೂಹ’ಗಳನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಿ ಯುನೆಸ್ಕೊ(UNESCO) ಕನ್ನಡಿಗರಿ ಸಿಹಿ ಸುದ್ದಿ ಕೊಟ್ಟಿದೆ.

ಹೌದು, ಕನ್ನಡಿಗರಿಗೆ ಮತ್ತೊಂದು ಹೆಮ್ಮೆಯ ಸಂಗತಿ ದೊರಕಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳ ಸಮೂಹಗಳನ್ನ ಸೇರಿಸಲಾಗಿದೆ. ಹೀಗಾಗಿ ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳು ವಾಸ್ತುಶಿಲ್ಪಗಳ ರಾಜ ಎಂದೇ ಗುರುತಿಸಿಕೊಂಡಿದೆ. ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡು, ಸೋಮಾನಾಥಪುರದಲ್ಲಿರುವ ಹೊಯ್ಸಳರ ದೇವಾಲಯದ ಗರಿಮೆ ದುಪಟ್ಟಾಗಿದೆ. ಈ ವಿಚಾರವನ್ನು ವಿಶ್ವಸಂಸ್ಥೆಯು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಹೊಯ್ಸಳರ ಕಾಲದ ಪವಿತ್ರ ದೇವಾಲಯಗಳು. ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರಿವೆ. ಭಾರತಕ್ಕೆ ಅಭಿನಂದನೆಗಳು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದೆ. ಮೂಲಕ ಭಾರತದ 42 ಸ್ಮಾರಕಗಳು, ದೇವಾಲಯಗಳು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಅಂದಹಾಗೆ 12 ರಿಂದ 13ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯಗಳು ವಾಸ್ತುಶಿಲ್ಪಗಳಿಂದಲೇ ವಿಶ್ವವಿಖ್ಯಾತಿಯಾಗಿದೆ. ಕರ್ನಾಟಕದ ಎಲ್ಲಾ ಹೊಯ್ಸಳ ದೇವಾಲಯಗಳನ್ನು ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಣೆ ಮಾಡುತ್ತಿದೆ. ಅತ್ಯಂತ ವಿಶೇಷ ವಾಸ್ತುಶಿಲ್ಪದ ದೇವಾಲಯ ಇದಾಗಿದೆ. ಹೊಯ್ಸಳರು 12 ಮತ್ತು 13ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಪ್ರಮುಖ ರಾಜವಂಶಜರು. ಕಲೆ, ಸಾಹಿತ್ಯ ಮತ್ತು ಪ್ರಮುಖವಾಗಿ ದೇವಾಲಯದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಿದ್ದಾರೆ.

ಮೋದಿ ಹೇಳಿದ್ದೇನು ?
ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಹೊಯ್ಸಳ ದೇಗುಲಗಳ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ದೇವಾಲಯಗಳು ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. “ಭಾರತಕ್ಕೆ ಹೆಚ್ಚು ಹೆಮ್ಮೆ! ಹೊಯ್ಸಳರ ಭವ್ಯವಾದ ಪವಿತ್ರ ಮೇಳಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ಹೊಯ್ಸಳ ದೇವಾಲಯಗಳ ಕಾಲಾತೀತ ಸೌಂದರ್ಯ ಮತ್ತು ಸಂಕೀರ್ಣ ವಿವರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಜರ ಅಸಾಧಾರಣ ಕರಕುಶಲತೆಗೆ ಸಾಕ್ಷಿಯಾಗಿದೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.

https://x.com/narendramodi/status/1703790330099740685?t=pDP45b3V4ApeyGFu8s3Bag&s=08

ಇದನ್ನೂ ಓದಿ: M P Renukacharya: ಬಿಜೆಪಿಯ ಮತ್ತೊಂದು ವಿಕೆಟ್ ಪತನ- ಎಂ ಪಿ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ?!!

Leave A Reply

Your email address will not be published.