ತುಳು ಹಾಸ್ಯ ನಟ ಅರವಿಂದ್ ಬೋಳಾರ್ ಅವರಿಗೆ ರಸ್ತೆ ಅಪಘಾತ, ಆಸ್ಪತ್ರೆಗೆ ಧೌಡು !

ಮಂಗಳೂರಿನ ಸಿನಿ- ನಾಟಕ ಹಾಸ್ಯ ನಟ, ಅರವಿಂದ ಬೋಳಾರ್‌(Arvind Bolar) ಅವರಿಗೆ ರಸ್ತೆ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದಾರೆ.

ತುಳು ಚಿತ್ತರಂಗದ ದೈತ್ಯ ಪ್ರತಿಭೆ, ಮಂಗಳೂರ ಮಾಣಿಕ್ಯ ಖ್ಯಾತಿಯ ಖಾತ್ಯ ಹಾಸ್ಯ ನಟ ಅರವಿಂದ ಬೋಳಾರ್‌ ಸ್ಟೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸ್ಕಿಡ್‌ ಆಗಿ ಬಿದ್ದಿದ್ದಾರೆ. ಅಪಘಾತದಲ್ಲಿ ಅವರು ಗಂಭೀರ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯ ಆಗಿದೆ. ಅವರನ್ನೂ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರವಿಂದ್ ಬೋಳಾರ್. ಈ ಹೆಸರು ಕೇಳಿದ ತಕ್ಷಣ ತುಳುನಾಡ ಜನರ ಮೊಗದಲ್ಲಿ ಥಟ್ಟನೆ ಕಿರುನಗೆಯೊಂದು ಹಾದು ಹೋಗುತ್ತೆ. ತನ್ನ ಅದ್ಭುತ ನಟನೆ, ವಿಶಿಷ್ಟ ಮ್ಯಾನರಿಸಂ ಮೂಲಕ ತುಳು ರಂಗಭೂಮಿಯ ಪ್ರತಿಭೆ ಈ ಬೋಳಾರ್ ಚಿತ್ರರಂಗದಲ್ಲಿ ಅತ್ಯಧಿಕ ಅಭಿಮಾನಿಗಳನ್ನು ಹೊಂದಿದ್ದಾರೆ. ವೈದ್ಯರು ಗಾಬರಿ ಪಡುವ ಅಗತ್ಯ ಇಲ್ಲ ಎಂದಿದ್ದಾರೆ ಎನ್ನಲಾಗಿದೆ.

ಅವರು ಇಲ್ಲಿ ಬೈಕ್ ಸ್ಕಿಡ್‌ ಆಗಿ ಬೀಳದಿದ್ದರೆ ಜೀವಕ್ಕೇ ಅಪಾಯ ಉಂಟಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮಂಗಳೂರು ನಗರದ ಪಂಪ್‌ವೆಲ್ ಬಳಿ ಇಂದು ಹಾಸ್ಯ ನಟ ಅರವಿಂದ ಬೋಳಾರ್ (Aravind Bolar) ಅವರು ಅಪಘಾತಕ್ಕೆ ಉಂಟಾಗಿ ಬಿದ್ದು ಗಾಯಗೊಂಡಿದ್ದಾರೆ. ಅವರು ಬೈಕಿನಿಂದ ಹೋಗುವಾಗ ಅವರ ಎದುರುಗಡೆಯಿಂದ ಅತೀ ವೇಗವಾಗಿ ಚಲಿಸಿಕೊಂಡು ಬರುತ್ತಿದ್ದ ಮತ್ತೊಂದು ವಾಹನಕ್ಕೆ ತಾವು ಹೋಗಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ಬೈಕ್‌ ಅನ್ನು ಸಡನ್‌ ಆಗಿ ಬ್ರೇಕ್‌ ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ಬೈಕ್‌ ಕಂಟ್ರೋಲ್ ತಪ್ಪಿ ಸ್ಕಿಡ್‌ ಆಗಿ ಬಿದ್ದಿದೆ. ಒಂದು ವೇಳೆ ಅರವಿಂದ್ ಬೋಳಾರ್ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬ್ರೇಕ್ ಹಾಕದಿದ್ದರೆ ವೇಗವಾಗಿ ಬರುತ್ತಿದ್ದ ವಾಹನ ತನ್ನ ಮೇಲೆಯೇ ಹರಿದು ಪ್ರಾಣಕ್ಕೆ ಸಮಸ್ಯೆ ಆಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅವರ ಕಾಲಿಗೆ ಸಣ್ಣಪುಟ್ಟ ಗಾಯವಾಗಿದೆ. ಬೈಕ್ ಸ್ಕಿಡಾಗಿ ಬಿದ್ದ ಪರಿಣಾಮ ಅರವಿಂದ ಬೋಳಾರ್‌ಗೆ ಗಾಯವಾಗಿದೆ. ಅವರ ಕೈ- ಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಸಣ್ಣ ಸರ್ಜರಿ ಕೂಡಾ ನಡೆಯಲಿದೆಯಂತೆ. ಇನ್ನೊಂದುವಾರದಲ್ಲಿ ಅವರು ಹುಷಾರಾಗಲಿದ್ದಾರೆ. ನಾಳೆ ಮಂಗಳವಾರ ಅರವಿಂದ್ ಬೋಳಾರ್‌ರ ಕಾಲಿನ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ನಟನ ಸಂಬಂಧಿಕರು ತಿಳಿಸಿದ್ದಾರೆ. ಇಂಜೆಕ್ಷನ್ ನ ಪ್ರಭಾವದಿಂದ ರಿಯಾಕ್ಷನ್ ಆಗಿ ಕಣ್ಣು ಅರ್ಧ ಮುಚ್ಚಿದಂತೆ ಆಗಿದೆ.

ಕರಾವಳಿಯಲ್ಲಿ ಅರವಿಂದ್ ಬೋಳಾರ್ ಹೆಸರು ಕೇಳಿದ ತಕ್ಷಣ ಇರೋಬರೋ 32 ಹಲ್ಲುಗಳನ್ನು ಸಾರ್ವಜನಿಕರಿಗೆ ಕಾಣುವಂತೆ ನಗುವ ಅಗಲವಾದ ಮುಖವೊಂದು ಥಟ್ಟನೆ ಬಂದು ಮನಸ್ಸಲ್ಲಿ ನಿಲ್ಲುತ್ತದೆ. ದೈನಂದಿನ ಸಮಸ್ಯೆಗಳ ಮಧ್ಯೆ ಗಂಟು ಕಟ್ಟಿಕೊಂಡ ಮುಖ, ಸಿಕ್ಕು ಹಾಕಿಕೊಂಡ ಹುಬ್ಬು, ಗೋಜಲು ಗೊಂಡ ಮನಸ್ಸುಗಳು ಬೋಳಾರ್ ಹೆಸರು ಕೇಳಿದ ಕೂಡಲೇ ತಮ್ಮ ಬಿಗುವು ಸಡಿಲ ಮಾಡಿಕೊಂಡು ನಿರಾಳವಾಗುತ್ತವೆ. ಅದು ತುಳುನಾಡಿನ ಹಾಸ್ಯ ಪ್ರತಿಭೆ ಅರವಿಂದ್ ಬೋಳಾರ್ ಅವರ ಹೆಚ್ಚುಗಾರಿಕೆ.

ತನ್ನ ಅದ್ಭುತ ನಟನೆ, ವಿಶಿಷ್ಟ ಮ್ಯಾನರಿಸಂ ಮೂಲಕ ತುಳು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅರವಿಂದ ಬೋಳಾರ್ ಅವರು ಹಾಸ್ಯಪ್ರಿಯ ಕರಾವಳಿಯ ಹಲವು ಟ್ರೊಲ್ ಪೇಜುಗಳ ಪ್ರಮುಖ ಕಚ್ಚಾ ವಸ್ತು. ಈ ಪ್ರತಿಭೆಯ ಕೇವಲ ಮುಖವನ್ನು ಇಟ್ಟುಕೊಂಡು ಹಲವು ಸೋಶಿಯಲ್ ಮೀಡಿಯಾಗಳು ಇಂದು ಬದುಕುತ್ತಿವೆ. ಅಷ್ಟರ ಮಟ್ಟಿಗೆ ತುಳು ಮಾನಸದಲ್ಲಿ ಅರವಿಂದ್ ಬೋಳಾರ್ ರವರು ದೊಡ್ಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

Leave A Reply

Your email address will not be published.