ತಾಯಿ-ಮಗುವಿನ ಮೃತದೇಹ ಪತ್ತೆ ,ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಶಂಕೆ

ಮೈಸೂರು : ಎರಡು ವರ್ಷದ ಮಗುವಿನ ಮೃತದೇಹ ನೀರಿನ ತೊಟ್ಟಿಯಲ್ಲಿ ಹಾಗೂ ಮಗುವಿನ ತಾಯಿಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೈಸೂರಿನ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವರ ಪತ್ನಿ ಅನ್ನಪೂರ್ಣ (22) ಹಾಗೂ ಅವರ ಎರಡು ವರ್ಷದ ಗಂಡು ಮಗು ಮೋಕ್ಷಿತ್ ಮೃತಪಟ್ಟವರು ಎನ್ನಲಾಗಿದೆ.

ತನ್ನ ಎರಡು ವರ್ಷದ ಮಗುವಿನ ಮೃತದೇಹ ನೀರು ತುಂಬಿದ ಬಕೆಟ್ ನಲ್ಲಿ ಪತ್ತೆಯಾಗಿದೆ ಅದರ ಪಕ್ಕದಲ್ಲೇ ಅನ್ನಪೂರ್ಣ ಅವರ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹೆತ್ತ ತಾಯಿಯೇ ಮಗುವನ್ನು ಕೊಂದು ಬಳಿಕ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಅನ್ನಪೂರ್ಣ ಪತಿ ಮಹದೇವ ಪ್ರಸಾದ್ ಕೃಷಿಕನಾಗಿದ್ದು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು ಎನ್ನಲಾಗಿದೆ.

Leave A Reply

Your email address will not be published.