ಬೆಂಗಳೂರು,:: ಚಿತ್ರಮಂದಿರದ ಕೆಳಗೆ ಮೊಸಳೆ ಇಟ್ಟುಕೊಂಡು ಮಾರುತ್ತಿದ್ದ ಇಬ್ಬರು ಆರೋಪಿಗಳ ಬಂಧನ. ಮೊಸಳೆ ಪೊಲೀಸ್ ವಶಕ್ಕೆ.

ಬೆಂಗಳೂರು,:: ಚಿತ್ರಮಂದಿರದ ಕೆಳಗೆ ಮೊಸಳೆ ಇಟ್ಟುಕೊಂಡು ಮಾರುತ್ತಿದ್ದ ಇಬ್ಬರು ಆರೋಪಿಗಳ ಬಂಧನ. ಮೊಸಳೆ ಪೊಲೀಸ್ ವಶಕ್ಕೆ.

ಬೆಂಗಳೂರಿನ ಈಶ್ವರಿ ಚಿತ್ರಮಂದಿರ ಒಂದರ ಕೆಳಗೆ ನೀರಿನ ಟ್ಯಾಂಕಿನಲ್ಲಿ ಮೊಸಳೆ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಜಯನಗರದ ಸೋಮೇಶ್ವರ ನಿವಾಸಿ ಅಬ್ದುಲ್ ಖಾಲಿದ್ ಹಾಗೂ ಕನಕಪುರದ ಕಲ್ಲಹಳ್ಳಿ ಯ ನಿವಾಸಿಗುರುರಾಜ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಚೆನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಈಶ್ವರಿ ಥಿಯೇಟರ್ ಇರುವ ಕಟ್ಟಡ ಕೆಳಭಾಗದಲ್ಲಿ ಆರೋಪಿಗಳು ನೀರಿನ ಕ್ಯಾನ್ ಒಳಗೆ ಮೊಸಳೆಯನ್ನು ಇಟ್ಟು, ಮಾರಾಟಕ್ಕೆ ಯತ್ನಿಸುತ್ತಿದ್ದರು.ಈ ವಿಷಯದ ಮಾಹಿತಿ ಸಿಕ್ಕಿದ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳಕ್ಕೆ, ಆರೋಪಿಗಳನ್ನು ಬಂದಿಸಿ, ಮೊಸಳೆಯನ್ನು ವರ್ಷಕ್ಕೆ ಪಡೆದುಕೊಂಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave A Reply

Your email address will not be published.