ಮುಖ್ಯಮಂತ್ರಿ ಹುದ್ದೆಗೆ ಮುರುಗೇಶ್ ನಿರಾಣಿ ?

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ವರಿಷ್ಠರ ಸೂಚನೆಗೆ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೋರ್ವರಾದ ಸಚಿವ ಮುರುಗೇಶ್‌ ನಿರಾಣಿ ಅವರ ನಿವಾಸಕ್ಕೆ ವಿವಿಧ ಮಠಾಧೀಶರು ಆಗಮಿಸಿ ಆಶೀರ್ವದಿಸಿದ್ದಾರೆ.

ಈ ಮಧ್ಯೆ ಅಮಿತ್‌ ಶಾ ಅವರು ಗುರುವಾರ ತಡರಾತ್ರಿ ಕರೆ ಮಾಡಿ, ಯಾವುದೇ ಸಮಯದಲ್ಲಿ ದಿಲ್ಲಿಗೆ ಬರಲು ಸಿದ್ಧರಾಗಿರಿ ಎಂಬ ಸಂದೇಶ ನೀಡಿದ್ದಾರೆ ಎನ್ನಲಾಗುತ್ತಿದೆ. ಇದರ ಪೂರ್ವಭಾವಿಯಾಗಿ ಮುರುಗೇಶ ನಿರಾಣಿ ಅವರು ಕಾಶಿ ಯಾತ್ರೆ ಕೈಗೊಂಡು ಪವಿತ್ರ ಸ್ನಾನ ಮಾಡಿ ಹಿಂದಿರುಗಿದ್ದರು.

ಇದರಿಂದ ನಿರಾಣಿ ಸಿಎಂ ಖುರ್ಚಿ ಏರಲಿದ್ದಾರೆ ಎನ್ನಲಾಗಿದೆ. ಮುರುಗೇಶ ನಿರಾಣಿ ಜೊತೆಗೆ ಇನ್ನೂ ಹಲವು ಹೆಸರುಗಳು ತೇಲಿ ಬರುತ್ತಿದ್ದು, ಅದರಲ್ಲಿ ಪ್ರಹ್ಲಾದ ಜೋಶಿ ಮತ್ತು ಬಿಎಲ್ ಸಂತೋಷ್ ಅವರ ಹೆಸರು ಮುಂಚೂಣಿಯಲ್ಲಿದೆ.

Leave A Reply

Your email address will not be published.