ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಹಿರಣ್ಯ ಗಣಪತಿ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆ

ನರಿಮೊಗರು: ಇತ್ತೀಚೆಗೆ ನಿಧನರಾದ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಹಿರಣ್ಯ ಗಣಪತಿ ಭಟ್ ಇವರ ಶ್ರದ್ದಾಂಜಲಿ ಸಭೆ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ, ಸಂಚಾಲಕರಾದ ಭಾಸ್ಕರ ಆಚಾರ್ ಹಿಂದಾರು, ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಪುತ್ತೂರಾಯ, ಪ್ರಸನ್ನ ಭಟ್, ಎಸ್.ಜಿ.ಕೃಷ್ಣ, ಸುಬ್ರಾಯ ಬಿ.ಎಸ್, ವೆಂಕಟ ಕೃಷ್ಣ ಕೆ.ಕೆ, ಉಪಸ್ಥಿತರಿದ್ದರು.

ಗಣಪತಿ ಭಟ್ ಅವರ ಆದರ್ಶ ಗುಣಗಳು ಹಾಗೂ ಅವರ ಜೀವನ ಶೈಲಿಯು ನಮಗೆ ದಾರಿದೀಪವಾಗಿದ್ದು ಅಗಲುವಿಕೆಯು ನಮ್ಮ ಸಮಾಜಕ್ಕೆ ಹಾಗೂ ಶಾಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಕೆದಿಲಾಯರು ಸ್ಮರಿಸಿದರು.

ಈ ಸಂದರ್ಭದಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಮತ್ತು ಭಜನೆಯನ್ನು ನಡೆಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಮಾಲಾ ವಿ.ಎನ್ ಸ್ವಾಗತಿಸಿ,ವಂದಿಸಿದರು.

Leave A Reply

Your email address will not be published.