Manjeshwar: ಆಂಬುಲೆನ್ಸ್ – ಮತ್ತು ಕಾರಿನ ನಡುವೆ ಭೀಕರ ಅಪಘಾತ; ಮೂವರ ಸಾವು, ನಾಲ್ವರಿಗೆ ಗಾಯ
![Manjeshwar](https://hosakannada.com/wp-content/uploads/2024/05/IMG-20240507-WA0027-jpg.webp)
Manjeshwar: ಆಂಬುಲೆನ್ಸ್ – ಮತ್ತು ಕಾರಿನ ನಡುವೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಮೂವರು ಮೃತಪಟ್ಟ ಘಟನೆಯೊಂದು ಮಂಜೇಶ್ವರ ಕುಂಜತ್ತೂರು ಬಳಿ ಮೇ.7 ರ ಮಂಗಳವಾರ ನಡೆದಿದೆ. ಈ ಘಟನೆಯಲ್ಲಿ ನಾಲ್ಕು ಜನರಿಗೆ ಗಾಯವಾಗಿದೆ.
![](https://hosakannada.com/wp-content/uploads/2024/07/First.jpeg)
ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಅಪಘಾತ ಸಂಭವಿಸಿದೆ. ಆಂಬುಲೆನ್ಸ್ ವಿರುದ್ಧ ದಿಕ್ಕಿನಲ್ಲಿ ಬಂದಿದ್ದು, ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
![](https://hosakannada.com/wp-content/uploads/2024/07/Middle.jpeg)
ಬೆಂಗಳೂರಿನಿಂದ ತ್ರಿಶೂರು ಭಾಗಕ್ಕೆ ಸಂಚರಿಸುತ್ತಿದ್ದ ಶರತ್, ಮೆನನ್, ಶ್ರೀನಾಥ್ ಸೇರಿ ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಬೇಕಷ್ಟೇ.
ಕಾಸರಗೋಡು ಚಟ್ಟಂಚಾಲ್ ನಿಂದ ಅಪಘಾತಕ್ಕೀಡಾದ ಗಾಯಾಳು, ಜೊತೆಗೆ ಇದ್ದ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಹಾಗೂ ಮಂಗಳೂರಿನಿಂದ ಕಾಸರಗೋಡು ತ್ರಿಶೂರು ಕಡೆ ಹೋಗುತ್ತಿದ್ದ ಕಾರು ನಡುವೆ ಈ ಭೀಕರ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದ ಸ್ಥಳದಲ್ಲಿ ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿ ಕಾರಿನಲ್ಲಿದ್ದವರನ್ನು ಹೊರಗೆ ತೆಗೆದು, ಶವಗಳನ್ನು ಮಂಗಳ್ಪಾಡಿ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Tumkur: 7 ಬೋರು ಕೊರೆಸಿದರೂ ನೀರು ಕೊಡದ ಭೂಮಿ, ಹತಾಶ ರೈತನಿಂದ ಆತ್ಮಹತ್ಯೆ !
Hello there, just became alert to your blog through Google,
and found that it’s truly informative. I’m going to watch out
for brussels. I’ll be grateful if you continue this in future.
Many people will be benefited from your writing.
Cheers! Lista escape roomów
I was looking through some of your blog posts on this website and I believe this website is real informative!
Keep putting up.?