ಆಟವಾಡುತ್ತಿದ್ದ ಮಗು ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಸಾವು

ಮೈಸೂರು: ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟುಕೊಂಡು ತನ್ನ ಪಾಡಿಗೆ ಆಟವಾಡಿಕೊಂಡಿದ್ದ ಪುಟ್ಟ ಕಂದ ಮನೆಯಲ್ಲೇ ದುರಂತ ಅಂತ್ಯ ಕಂಡಿದೆ.

ಹುಣಸೂರು ತಾಲೂಕಿನ ತರಿಕಲ್ ಗ್ರಾಮದ ಸುಂದರ ಎಂಬುವರ ಎರಡು ವರ್ಷದ ಮಗು ಸಮರ್ಥ್ ಮೃತ ಮಗು.

ಮನೆಯಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಮನೆಯವರೆಲ್ಲ ಅಕ್ಕ- ಪಕ್ಕದ ಮನೆಯನ್ನೂ ಹುಡುಕಾಡಿದರೂ ಸಿಗಲಿಲ್ಲ. ನಂತರ ಮನೆಯ ಬಾತ್ ರೂಂ ಬಳಿ ಹೋಗಿ ನೋಡಿದಾಗ ನೀರು ತುಂಬಿ ಬಕೆಟ್ ಒಳಗೆ ಬಿದ್ದು ಮಗು ಸತ್ತಿರುವುದು ಗೊತ್ತಾಗಿದೆ.

ಮಗುವನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Leave A Reply

Your email address will not be published.