ವಿದ್ಯುತ್ ಪ್ರವಹಿಸಿ ದಂಪತಿ ಸಾವು | ಕಾಪಾಡಲು ಬಂದ ನೆರೆಮನೆಯಾತನು ವಿದ್ಯುತ್ ಶಾಕ್ ನಿಂದ ಮೃತ್ಯು

ವಿದ್ಯುತ್ ಅವಘಡದಿಂದ ದಂಪತಿಯನ್ನು ಪಾರು ಮಾಡಲು ಹೋದ ಪಕ್ಕದ ಮನೆಯಾತನನ್ನು ಸೇರಿಸಿ ಮೂವರೂ ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಪ್ರಕ್ಕುಲಂನಲ್ಲಿ ನಡೆದಿದೆ.

ಸಂತೋಷ್ (45), ಪತ್ನಿ ರಾಮ್‍ಲತಾ (42) ಮತ್ತು ಇವರ ನೆರಮನೆಯ ಶ್ಯಾಮ್ ಕುಮಾರ್(35) ಮೃತ ದುರ್ದೈವಿಗಳಾಗಿದ್ದಾರೆ. ನಿನ್ನೆ ರಾತ್ರಿ ಈ ದಂಪತಿಯ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಅವರ ಚೀರಾಟವನ್ನು ಕೇಳಿ ಕಾಪಾಡಲು ಬಂದ ನೆರೆ ಮನೆಯವನನ್ನು ಸೇರಿಸಿ ಮೂವರು ಸಾವನ್ನಪ್ಪಿದ್ದಾರೆ.

ಬಾತ್‍ರೂಂನಿಂದ ಹೊರಬರುತ್ತಿದ್ದಾಗ ರಾಮಲತಾ ಆಯತಪ್ಪಿ ಕೆಳಗೆ ಬಿದ್ದಿದ್ದರು. ನಂತರ ಎದ್ದುನಿಲ್ಲಲು ಪ್ರಯತ್ನಿಸಿದ ಅವರು, ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಹಿಡಿದಿದ್ದಾರೆ. ಕೂಡಲೇ ಪತ್ನಿಯನ್ನು ಕಾಪಾಡಲು ಹೋದ ಸಂತೋಷ್‍ಗೆ ಕೂಡ ವಿದ್ಯುತ್ ತಗುಲಿದೆ. ಈ ದಂಪತಿಯ ಚೀರಾಟ ಕೇಳಿ ಓಡಿ ಬಂದ ಶ್ಯಾಮ್‍ಕುಮಾರ್ ದಂಪತಿಯನ್ನು ಕಾಪಾಡಲು ಮುಂದಾದರು. ಆದರೆ ದುರದೃಷ್ಟಕ್ಕೆ ಅವರ ಮೇಲು ವಿದ್ಯುತ್ ಪ್ರವಹಿಸಿದೆ. ಈ ವೇಳೆ ಮೂವರೂ ದಾರುಣವಾಗಿ ‌ಮೃತಪಟ್ಟಿದ್ದಾರೆ.

Leave A Reply

Your email address will not be published.