ಕನ್ನಡ ಸಿನಿಮಾ ಅತ್ಯಂತ ಕಳಪೆ ಎಂದ ನೆಟ್ಟಿಗ, ಅದಕ್ಕೆ ಚೇತನ್ ಬೆಂಬಲ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ಕಿಡಿ ಕಿಡಿ

ಬೆಂಗಳೂರು: ಕನ್ನಡ ಚಿತ್ರರಂಗ ಕಳಪೆ ಎಂದು ಟ್ವೀಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ನಟ ಚೇತನ್‍ರವರು ಬೆಂಬಲ ನೀಡಿ ಶೋಕಿ ಹೆಸರು ಮಾಡಲು ಕಷ್ಟಪಡುತ್ತಿರುವ ಜಾಬ್ ಲೆಸ್ ನಟ ಚೇತನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೊನ್ನೆ ಬುದ್ದಿ ಜೀವಿ ಎಂದು ತೋರ್ಪಡಿಸಿಕೊಳ್ಳುವ ಉಮೇದಿನಲ್ಲಿ ಲೂಸ್ ಲಾಕ್ ಮಾಡಿ ಬ್ರಾಹ್ಮಣರನ್ನು ತದವಿಕೊಂಡಿದ್ದ ಚೇತನ್ ತಮ್ಮ ಮೇಲೆ FIR ಹಾಕಿಸಿಕೊಂಡಿದ್ದರು.

ಇದೀಗ ಈ ವಿವಾದಿತ ನಟ ಕನ್ನಡಕ್ಕೆ ಆದ ಅವಮಾನದ ವಿಷಯದಲ್ಲಿ ಸುದ್ದಿಯಲ್ಲಿದ್ದು, ಆತನ ನಡೆಗೆ ನಟ ರಕ್ಷಿತ್ ಖಡಕ್ ಉತ್ತರ ನೀಡಿದ್ದಾರೆ.

‘ ದಕ್ಷಿಣ ಭಾರತದ ಕೆಟ್ಟ ಚಿತ್ರೋದ್ಯಮವಾದ ಕನ್ನಡ ಚಿತ್ರರಂಗದಲ್ಲಿ ಕೊನೆಗೂ ಭರವಸೆ ಮೂಡಿದೆ. ಮರುಭೂಮಿಯಂತಿರುವ ಕನ್ನಡ ಚಿತ್ರರಂಗದಲ್ಲಿ ಚೇತನ್ ಅಹಿಂಸಾರವರು ಮಳೆಯಂತಿದ್ದಾರೆ ‘ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು.

The worst film industry in south india finally has some hope. Chetan Ahimsa is a much needed rainstorm in that dry place called Kannada cinemahttps://t.co/QvM5iP2Ecx

— Sudipto Mondal (@mondalsudipto) June 12, 2021

ಇದಕ್ಕೆ ನಟ ಚೇತನ್ ಅಹಿಂಸಾರವರು ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದ. ಬೇರೆ ಸಿನಿಮಾಗಳಂತೆ ಕೆಜಿಎಫ್ ತರಹದ ಅನೇಕ ಉತ್ತಮ ಸಿನಿಮಾಗಳನ್ನು ನಾವು ಮಾಡಿದ್ದೇವೆ. ನೀವು ಆಡಿದ ಮಾತು ಕಟುವಾಗಿದ್ದರೂ ಅದನ್ನು ರಚನಾತ್ಮಕ ಪ್ರತಿಕ್ರಿಯೆ ಎಂದು ಪರಿಗಣಿಸುತ್ತೇವೆ ಎಂದು ರೀ ಟ್ವೀಟ್ ಮಾಡಿದ್ದರು. ಕನ್ನಡವನ್ನು ಅತ್ಯಂತ ಕೆಟ್ಟ ಎಂದು ಅವಮಾನಿಸಿದ ವ್ಯಕ್ತಿಯನ್ನು ಖಂಡಿಸುವ ಬದಲು, ಆ ವಿಷಯವನ್ನು ತೇಲಿ ಬಿಟ್ಟಿದ್ದಾರೆ ಚೇತನ್.

Thank u for appreciative words about me. I respect ur pro-equality journalism

As for KFI we have made many great film in the past & are presently evolving in terms of content/structural reforms just like other industries

We take ur words— though harsh— as constructive feedback https://t.co/awpKOhZP7T

— Chetan Kumar / ಚೇತನ್ (@ChetanAhimsa) June 13, 2021

ಈ ಎರಡು ಟ್ವೀಟ್‍ಗಳನ್ನು ಗಮನಿಸಿದ ರಕ್ಷಿತ್ ಶೆಟ್ಟಿ, ಈ ಚಿತ್ರರಂಗ ನನಗೆ ಹಾಗೂ ಅನೇಕರಿಗೆ ಒಂದು ವೇದಿಕೆ ನೀಡಿದೆ. ಈ ವೇದಿಕೆಯನ್ನು ನನಗಿಂತ ಮುನ್ನ ಅನೇಕ ದಿಗ್ಗಜರು ಕಟ್ಟಿದ್ದಾರೆ. ನಿಮಗೆ ಅವರ ಬಗ್ಗೆ ತಿಳಿದಿಲ್ಲ ಎಂಬುವುದು ನನಗೆ ಗೊತ್ತಿದೆ. ಏನೂ ಇಲ್ಲವಾಗಿದ್ದಾಗ ನನಗೆ ಈ ಚಿತ್ರರಂಗ ಜೀವನ ನೀಡಿದೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಜನಕ್ಕೆ ಜೀವನ ನೀಡಿದೆ ಎಂದು ಖಾರವಾಗಿ ಉತ್ತರಿಸಿದ್ದಾರೆ.

This film Industry in the south has given me platform to express myself and to many many more. A platform built by many legends before me, whom I am sure you aren’t aware of. It has made my life from nothing to what I am today. It is life for thousands who work here. https://t.co/IfWOLzTNDV

— Rakshit Shetty (@rakshitshetty) June 13, 2021

“ಚೇತನ್‍ರವರೇ ನಿಮ್ಮ ಕೆಲಸಗಳಿಂದ ನಾನು ನಿಮ್ಮನ್ನು ಗೌರವಿಸುತ್ತೇನೆ. ಆದರೆ ನೀವು ನಿಮ್ಮ ಆಲೋಚನೆಗಳನ್ನು ಸರಿಮಾಡಿಕೊಳ್ಳಬೇಕು. ಕೆಟ್ಟದ್ದನ್ನು ಬಿತ್ತಿದ ಕಡೆ ಕೆಡುಕು ಬೆಳೆಯುತ್ತದೆ ” ಎಂದು ಖಡಕ್ ಟ್ವೀಟ್ ಮಾಡುವ ಮೂಲಕ ತಿಳಿ ಹೇಳಿದ್ದಾರೆ. ಆದರೆ ಈಗಾಗಲೇ ನೆಗೆಟಿವ್ ವ್ಯಕ್ತಿತ್ವಗಳ ಜತೆ ಓಡಾಡುತ್ತಿರುವ ಚೇತನ್ ಮನಸ್ಥಿತಿ ಅರ್ಧ ಹಳ್ಳ ಹಿಡಿದಿದೆ.

With all due respect to @ChetanAhimsa whom we admire for the work he does… but you sir, you have to clean up your mental space… for the ‘worst’ lies where worse is sowed… all the best with that

— Rakshit Shetty (@rakshitshetty) June 13, 2021

ಒಟ್ಟಾರೆ ಚೇತನ್ ನಡೆಯುತ್ತಿರುವ ದಾರಿ ‘ ಆ ದಿನಗಳ ‘ ದಾರಿ. ಅದು ಸರಿ ಇಲ್ಲದ ದಾರಿ. ಆತ ಸರಿ ಮಾಡಿಕೊಳ್ಳದೆ ಇದ್ದರೆ, ಕಾಲ ಆತನನ್ನು ಶೀಘ್ರ ಸರಿಸಿ ಮುಂದಕ್ಕೆ ಹೋಗುತ್ತದೆ. ತನ್ನನ್ನು ತಾನು ತುಂಬಾ ಬುದ್ಧಿವಂತನೆಂದು ಅಂದುಕೊಂಡಿರುವ ನಟ ಚೇತನ್ ತನ್ನ ಬುದ್ಧಿವಂತಿಕೆ ಪ್ರದರ್ಶಿಸಲು ಇದು ಸಕಾಲ.

Leave A Reply

Your email address will not be published.