ನೆಲ್ಯಾಡಿ | ಸೀನಿಯರ್ ಚೇಂಬರ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ‌ಹೊಣೆಯಾಗಿದೆ, ಇಂದಿನ ಕಾಲಮಾನದಲ್ಲಿ ಪರಿಸರದ ಉಳಿವಿನ ಕಡೆಗೆ ‌ಹೆಚ್ಚು ಒತ್ತು ನೀಡಬೇಕು, ಪ್ರತಿ ವರ್ಷ ಪರಿಸರ ದಿನದಂದು ಕೇವಲ ಸಂಕೇತವಾಗಿ ಗಿಡನೆಡುವುದು ಆಗಬಾರದು, ನೆಟ್ಟ ಗಿಡಗಳನ್ನು ಪೋಷಿಸ ಬೇಕು ಆಗ ಮಾತ್ರ ಆಚರಣೆಗೆ ಮಹತ್ವ ಬರುತ್ತದೆ ಎಂದು ಸಂತ ಜಾಜ್ ಪದವಿಪೂರ್ವ ಕಾಲೇಜಿನ ಸಂಚಾಲಕರು ಮತ್ತು ನೆಲ್ಯಾಡಿ ಸೀನಿಯರ್ ಚೇಂಬರ್ ನ ಸ್ಥಾಪಕಾಧ್ಯಕ್ಷರಾದ ಅಬ್ರಹಾಂ ವಗೀಸರ್ ಹೇಳಿದರು.

ನೆಲ್ಯಾಡಿ ಸೀನಿಯರ್ ಚೇಂಬರ್ ನ ವತಿಯಿಂದ ವಿಶ್ವ ಪರಿಸರದ ದಿನಾಚರಣೆಯ ಪ್ರಯುಕ್ತ ಸಂತ ಜಾಜ್ ಪದವಿ ಪೂರ್ವ ಕಾಲೇಜು ನೆಲ್ಯಾಡಿಯಲ್ಲಿ ಹಣ್ಣುಗಳು ಗಿಡಗಳನ್ನು ನೆಡುವ ಮತ್ತು
ಹೈಸ್ಕೂಲ್ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ” ಪರಿಸರ ಸಂರಕ್ಷಣೆ ಮತ್ತು ಕೊರೋನ” ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪ್ರೈಮರಿ ವಿದ್ಯಾರ್ಥಿ ಗಳಿಗೆ “ಪರಿಸರ ಸಂರಕ್ಷಣೆ” ವಿಷಯದ ಮೇಲೆ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಸುಮಾರು 80 ವಿದ್ಯಾರ್ಥಿಗಳು ಭಾಗವಹಿಸಿದರು. ಹಾಗೆಯೇ ವಿಜೇತರುಗಳನ್ನು ಆಯ್ಕೆ ಮಾಡಲಾಯಿತು .
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅಮೃತ ರಾಜೇಂದ್ರ ಹೆಗಡೆ, ಶ್ರೀ ಕಾಳಿಕಾಂಬ ಸರಕಾರಿ ಪೌಢಶಾಲೆ , ಶಿರಸಿ, ದ್ವಿತೀಯ ಬಹುಮಾನ ವನ್ನು ಶರಣ್ಯ ಎಸ್ ಆಚಾರ್ಯ, ಜೈನ್ ಹೈಸ್ಕೂಲ್ ಮೂಡುಬಿದಿರೆ ಹಾಗೂ ಮಾನ್ಯ ಆರ್. ಜೆ, ಸರಕಾರಿ ಪ್ರೌಢಶಾಲೆ ಉಜಿರೆ,
ಚಿತ್ರಕಲೆ ಯಲ್ಲಿ ಪ್ರಥಮ ಸ್ಧಾನ ಜೆಸ್ವಿತ್ ತೋಟ, ಸೈಂಟ್ ಅ್ಯನಸ್ ಕಡಬ, ದ್ವಿತೀಯ ಸ್ಧಾನ ಶ್ರವಣ್ ಸರಸ್ವತಿ ವಿದ್ಯಾಕೇಂದ್ರ ಕಡಬ ಪಡೆದು ಕೊಂಡರು.


ಕಾರ್ಯ ಕ್ರಮದಲ್ಲಿ ನೆಲ್ಯಾಡಿ ‌ಸೀನಿಯರ್ ಚೇಂಬರ್ ನ ಅಧ್ಯಕ್ಷರಾದ ಡಾ. ಸದಾನಂದ ಕುಂದರ್, ಕಾರ್ಯದರ್ಶಿ ಪ್ರಶಾಂತ ಸಿ.ಎಚ್, ಕೋಶಾಧಿಕಾರಿ ವೆಂಕಟರಮಣ ‌ಅರ್, ಕಾಲೇಜಿನ ಪ್ರಾಂಶುಪಾಲರಾದ ಏಲಿಯಸ್, ಮುಖ್ಯಗುರುಗಳಾದ ತೋಮಸ್, ಹಾಗೂ ಸದಸ್ಯರಾದ ವಿಶ್ವನಾಥ ರೈ ಉಪಸ್ಥಿತರಿದ್ದರು.

Leave A Reply

Your email address will not be published.