ಮನನೊಂದ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಉದ್ಯೋಗಿ ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ: ಮನನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ.

ಚಿರಂಜೀವಿ (34) ಆತ್ಮಹತ್ಯೆ ಮಾಡಿಕೊಂಡವರು. ಇವರು ಕೋಟೇಶ್ವರದ ಪ್ಲಾಸ್ಟಿಕ್ ಇಂಡಸ್ಟ್ರಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದರು. ಇವರು ವಸತಿಗೃಹದಲ್ಲಿ ವಾಸಮಾಡಿಕೊಂಡಿದ್ದು, ಮೇ.27 ರಂದು ಸಂಜೆ ಪಕ್ಕದ ರೂಮಿನ ರಜನೀಶ್ ಎಂಬಾತ ಚಿರಂಜೀವಿಯನ್ನು ಕರೆದರೂ ಪ್ರತಿಕ್ರಿಯೆ ನೀಡದಾಗ ಕಿಟಕಿ ಮೂಲಕ ಕೋಣೆಯೊಳಗೆ ನೋಡಿದ್ದಾರೆ.

ಈ ವೇಳೆ ಚಿರಂಜೀವಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಿರಂಜೀವಿಯವರು ಯೂವುದೋ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

Leave A Reply

Your email address will not be published.