ದಡಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್ | ಸ್ಥಳೀಯರಿಂದ ಹತ್ತು ಮಂದಿಯ ರಕ್ಷಣೆ

ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್, ಉಳ್ಳಾಲ ಕೋಡಿಯಲ್ಲಿ ದಡಕ್ಕೆ ಬಂದು ಅಪ್ಪಳಿಸಿದೆ. ಬೋಟ್ ನಲ್ಲಿದ್ದ 10 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಭಾನುವಾರ ನಸುಕಿನ ಜಾವ ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದರು. ಬೋಟ್ ನಲ್ಲಿದ್ದ ಹತ್ತು ಮೀನುಗಾರರಲ್ಲಿ ಕನ್ಯಾಕುಮಾರಿ ಮೂಲದ ಐದು ಮಂದಿ ಮೀನುಗಾರರು ಕುಡಿತದ ಮತ್ತಿನಲ್ಲಿದ್ದು ದಡಕ್ಕೆ ಅಪ್ಪಳಿಸಿದಾಗ ಮೀನುಗಾರರು ವಾಂತಿ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಚಾಲಕ ಇನ್ನೋರ್ವನ ಕೈಯಲ್ಲಿ ಬೋಟ್ ನೀಡಿದ ಪರಿಣಾಮ ಈ ಘಟನೆ  ಸಂಭವಿಸಿದೆ.

ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಅಝಾನ್ ಹೆಸರಿನ ಬೋಟ್ ಎಂದು ತಿಳಿದು ಬಂದಿದೆ.
ಉಳ್ಳಾಲ ಪೊಲೀಸರಿಂದ ಪ್ರಕರಣ ದಾಖಲಾಗಿದೆ.ಇಷ್ಟು ಅಜಾಗರೂಕತೆಯಿಂದ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Leave A Reply

Your email address will not be published.