ಬೆಳ್ತಂಗಡಿ | ಅರ್ಧದಲ್ಲಿ ಕೆಟ್ಟು ನಿಂತ ವಾಹನ, ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ಪೊಲೀಸರ ವಾಹನವೇ ಆಂಬುಲೆನ್ಸ್ ಆಯ್ತು !!

ಬೆಳ್ತಂಗಡಿಯಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ತಮ್ಮ ವಾಹನದಲ್ಲೇ ಕರೆದುಕೊಂಡು ಹೋಗಿ ಆಕೆಯ ನೋವಿಗೆ ಸಕಾಲದಲ್ಲಿ ಸ್ಪಂದಿಸಿದ್ದಾರೆ.

ಗುರುವಾಯನಕೆರೆಯ ಮುಸ್ಲಿಂ ಮಹಿಳೆಯೊಬ್ಬರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅರ್ಕುಲ ಎಂಬಲ್ಲಿ ವಾಹನ ಕೆಟ್ಟುಹೋಗಿದೆ. ಆ ಸಂದರ್ಭದಲ್ಲಿ ಕುಟುಂಬವು ವಾಹನ ಸಿಗದೇ ಪರದಾಡಿದೆ.

ಈ ಸಂದರ್ಭದಲ್ಲಿ ಅಲ್ಲೇ ಗಸ್ತು ತಿರುಗುತ್ತಿದ್ದ ಮಂಗಳೂರಿನ ಪೊಲೀಸರು ಸ್ವತಃ ಅವರ ಪೋಲಿಸ್ ವಾಹನದಲ್ಲಿ ಗರ್ಭಿಣಿಯನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆಗೆ ಕರೆದುಕೊಂಡು ಹೋಗುವ ಮೂಲಕ ಕಾನೂನು ನಿಯಂತ್ರಿಸಲೂ ಸರಿ, ಸಹಾಯಕ್ಕೂ ರೆಡಿ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

Leave A Reply

Your email address will not be published.