ಮಂಗಳೂರಿನಲ್ಲಿ ಅಗತ್ಯ ಸೇವೆಗಳೊಂದಿಗೆ ಕಾರ್ಯ ಚಟುವಟಿಕೆ ಆರಂಭ

ಶನಿವಾರ,ಭಾನುವಾರದ ವೀಕೆಂಡ್ ಕರ್ಫ್ಯೂನಿಂದ ಸ್ತಬ್ಧವಾಗಿದ್ದ ಮಂಗಳೂರಿನಲ್ಲಿ ಸೋಮವಾರ ಮತ್ತೆ ಅಗತ್ಯ ಸೇವೆಗಳೊಂದಿಗೆ ಕಾರ್ಯ ಚಟುವಟಿಕೆ ಆರಂಭಗೊಂಡಿದೆ.

ರಸ್ತೆಗಳಲ್ಲಿ ಖಾಸಗಿ ಬಸ್ ಸಂಚಾರ ಸೇರಿದಂತೆ ವಾಹನ ಸಂಚಾರ ಆರಂಭಗೊಂಡಿದೆ.

ಸರಕಾರದ ಆದೇಶದಂತೆ ಮೇ 4ರವರೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಅಂಗಡಿ, ಮಾಲ್, ಮಳಿಗೆಗಳು ತೆರೆಯಲು ಅವಕಾಶ ಇರುವುದಿಲ್ಲ. ಉಳಿದಂತೆ ದಿನಸಿ, ತರಕಾರಿ, ಹಾಲು , ಔಷಧ, ಕಟ್ಟಡ ನಿರ್ಮಾಣ ಸಾಮಗ್ರಿಗಳ ಅಂಗಡಿಗಳಿಗೆ ಅವಕಾಶವಿದೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ಅವಧಿಯಲ್ಲೂ ಎರಡು ದಿನ ಬಹುತೇಕ ಸ್ತಬ್ಧವಾಗಿದ್ದ ಮಂಗಳೂರಿನಲ್ಲಿ ಸೋಮವಾರ ವಾಹನ ಸಂಚಾರ ಚುರುಕುಗೊಂಡಿವೆ.

Leave A Reply

Your email address will not be published.