ಸುಳ್ಯ | ವಿದ್ಯುತ್ ಸಮಸ್ಯೆಯನ್ನು ನೀಗಿಸಿ ಕೊಡುವಂತೆ ನ ಪಂ ಸದಸ್ಯ ಕೆ ಎಸ್ ಉಮ್ಮರ್ ಮೆಸ್ಕಾಂ ಅಧಿಕಾರಿಗಳಿಗೆ ಮನವಿ

ವರದಿ : ಹಸೈನಾರ್ ಜಯನಗರ

ಸುಳ್ಯದ ಶ್ರೀರಾಮಪೇಟೆ, ಬೋರುಗುಡ್ಡೆ, ನಾವೂರು ಮುಂತಾದ ಕಡೆಗಳಲ್ಲಿ ನಿರಂತರ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗುತ್ತಿದ್ದು ಇದನ್ನು ಶೀಘ್ರದಲ್ಲಿ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ನಗರ ಪಂಚಾಯಿತಿ ಸದಸ್ಯ ಕೆಎಸ್ ಉಮ್ಮರ್ ಮೆಸ್ಕಾಂ ಅಧಿಕಾರಿಗಳಿಗೆ ಮೇ15ರಂದು ಮನವಿ ನೀಡಿದರು.

ಸುಳ್ಯ ನಗರದ ಹಲವು ಭಾಗಗಳಿಗೆ ದುಗಲಡ್ಕ ಫೀಲ್ಡರ್ ನಿಂದ ವಿದ್ಯುತ್ ಸರಬರಾಜುಗೊಳ್ಳುತ್ತಿದ್ದು, ಜಟ್ಟಿಪಳ್ಳ ಬೋರುಗುಡ್ಡೆ , ಶ್ರೀರಾಮ್ ಪೇಟೆ ಭಾಗಗಳಿಗೆ ಪ್ರತ್ಯೇಕ ಪ್ರತ್ಯೇಕ ಟ್ರಾನ್ಸ್ಫರ್ ಮರ್ಗಳನ್ನು ಅಳವಡಿಸಿ ವಿದ್ಯುತ್ ಸಮಸ್ಯೆಯಿಂದ ಪರಿಹಾರ ಕಲ್ಪಿಸಿ ಕೊಳ್ಳಬೇಕಾಗಿ ವಿನಂತಿಸಿಕೊಂಡಿದ್ದಾರೆ. ಹತ್ತು ದಿನಗಳಲ್ಲಿಈ ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ವಾರ್ಡಿನ ಮತ್ತು ಸ್ಥಳೀಯ ಸಾರ್ವಜನಿಕರನ್ನು ಕಚೇರಿ ಬಳಿ ತಂದು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಹಾರಿಶ್, ಅಹಮದ್ , ಆಶ್ರಫ್ ಝಂಝಂ, ಜಾಫರ್,ಬಾತಿಷಾ,ಜಾಫರ್ ಸಾಗರ್, ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.