ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನ 1100 ಬಿಹಾರದ ವಲಸೆ ಕಾರ್ಮಿಕರು ಇಂದು ಮರಳಿ ಗೂಡಿಗೆ | ಬೀಳ್ಕೊಡಲು ಪುತ್ತೂರು ಶಾಸಕರ ವಾರ್ ರೂಂ ಸಜ್ಜು
ಇವತ್ತು ಬಿಹಾರ ಮೂಲದ 1100 ಮಂದಿ ವಲಸೆ ಕಾರ್ಮಿಕರಿಗೆ ಬಿಡುಗಡೆಯ ದಿನ. ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಬಾಕಿಯಾಗಿರುವ ಬಿಹಾರ ಮೂಲದ ಕಾರ್ಮಿಕರುಗಳು ವಾಪಾಸ್ ತಮ್ಮ ತಾಯ್ನಾಡಿಗೆ ಹೊರಡಲಿದ್ದಾರೆ.
![](https://hosakannada.com/wp-content/uploads/2024/07/First.jpeg)
ಅವರಿಗೆ ತಮ್ಮ ತಮ್ಮ ಊರಿಗೆ ತೆರಳಲು ರೈಲಿನ ವ್ಯವಸ್ಥೆ ಮಾಡಲಾಗಿದೆ. ಇವತ್ತು ಮಧ್ಯಾಹ್ನ 2 ಗಂಟೆಗೆ ಪುತ್ತೂರು ರೈಲ್ವೇ ಸ್ಟೇಷನ್ ನಿಂದ ರೈಲಿನ ಮೂಲಕ ಬಿಹಾರಕ್ಕೆ ವಾಪಸ್ ಕಳುಹಿಸಲಾಗುತ್ತಿದೆ.
![](https://hosakannada.com/wp-content/uploads/2024/07/Middle.jpeg)
ಪ್ರಯಾಣದ ಅವಧಿಯ ರೈಲಿನ ಮೂಲಕ ಬಿಹಾರಕ್ಕೆ ವಾಪಸ್ ಕಳುಹಿಸಲಾಗುತ್ತಿದೆ.
ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು ಅವರ ವಾರ್ ರೂಮ್ ನ ಪ್ರಾಯೋಜಕತ್ವದಲ್ಲಿ ಪ್ರಯಾಣದ ಅವಧಿಯಲ್ಲಿ ಈ ಬಿಹಾರಿ ಕಾರ್ಮಿಕರಿಗೆ ಸೇವಿಸಲು 5 ಸಾವಿರ ಚಪಾತಿ, ಅಗತ್ಯ ಇತರ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ.