ಅಮ್ಚಿನಡ್ಕದಲ್ಲಿ ಸಂಪ್ಯ ಪೊಲೀಸರ ಕಾರ್ಯಾಚರಣೆ| ಕಳ್ಳ ಬಟ್ಟಿ ಸಾಗಾಟ ಪತ್ತೆ
ಪುತ್ತೂರು: ಕಳ್ಳಬಟ್ಟಿ ತಯಾರಿಸಿ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ (ಸಂಪ್ಯ)ಪೊಲೀಸರು ದಾಳಿ ನಡೆಸಿ ಆರೋಪಿ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
![](https://hosakannada.com/wp-content/uploads/2024/07/First.jpeg)
ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿ ಸಂಪ್ಯ ಠಾಣಾ ಎಸೈ ಉದಯರವಿ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರ ಮಂಗಲ ಸಮೀಪದ ಪಂಜೋಡಿ ನಿವಾಸಿ ಕೇಶವ ಪಾಟಾಳಿ ಎಂಬವನನ್ನು ಬಂಧಿಸಿದ್ದಾರೆ.
![](https://hosakannada.com/wp-content/uploads/2024/07/Middle.jpeg)
ಪ್ರಕರಣದಲ್ಲಿ 10 ಲೀ.ಕಳ್ಳಬಟ್ಟಿ ಸಾರಾಯಿ ಹಾಗೂ ವಾಹನದ ಮೌಲ್ಯ ಸೇರಿ 2 ಲಕ್ಷದ 67 ಸಾವಿರ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಎಸೈ ಉದಯ ರವಿ,ಸಿಬಂದಿಗಳಾದ ಧರ್ಮಪಾಲ,ದೇವರಾಜ್,ಕರುಣಾಕರ,ಸಂಗೊಳ್ಳಿ ಬಸವರಾಜ್ ,ಚಾಲಕ ಹರೀಶ್ ಅವರು ಪಾಲ್ಗೊಂಡಿದ್ದರು.