ಸುಳ್ಯದ ಆಲೆಟ್ಟಿ ಗ್ರಾಮದ ಕೋಲ್ಚಾರು | ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶ

ಆಲೆಟ್ಟಿ ಗ್ರಾಮದ ಕೋಲ್ಚಾರು ಭಾಗದಲ್ಲಿ ಎ.8 ರಂದು ರಾತ್ರಿ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶಗೊಂಡಿದೆ ಎಂದು ತಿಳಿದು ಬಂದಿದೆ.

ಕೊಲ್ಚಾರು ಯಶೋಧ ಎಂಬವರ ತೋಟದಲ್ಲಿದ್ದ ಬಾಳೆ ಗಿಡ, ತೆಂಗು ಮತ್ತು ಅಡಿಕೆ ಮರಗಳನ್ನು ಕಿತ್ತು ಹಾಕಿವೆ. ಪಕ್ಕದ ಚಂದ್ರಶೇಖರ ಮತ್ತು ಕೃಷ್ಣವೇಣಿ ಎಂಬವರ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿ ಮಾಡಿದೆ.

ವಿಷಯ ತಿಳಿದು ಬೆಳಗ್ಗೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಕಾಡಾನೆಗಳ ಹಿಂಡಿನಲ್ಲಿ ಸುಮಾರು 7 ರಿಂದ 8 ಆನೆಗಳು ಇದ್ದಿರಬಹುದೆಂದು ಸ್ಥಳೀಯರು ತಿಳಿಸಿದರು.

Leave A Reply

Your email address will not be published.