ಬೆಳ್ತಂಗಡಿ | ಸ್ನಾನಗೃಹಕ್ಕೆ ಬೆಂಕಿ | ಮಹಿಳೆಗೆ ಗಾಯ
ಬೆಳ್ತಂಗಡಿಯ ಜೈನ್ ಪೇಟೆಯ ಬಂಟರ ಭವನದ ಹಿಂಭಾಗದಲ್ಲಿರುವ ಕೃಷ್ಣಪ್ಪ ಮೂಲ್ಯ ಅವರ ಮನೆಯ ಒಂದು ಪಾರ್ಶ್ವದಲ್ಲಿ ಇರುವ ಸ್ನಾನಗೃಹಕ್ಕೆ ಬೆಂಕಿ ಬಿದ್ದು ಮನೆಯೊಡತಿಯ ಕೈಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.
![](https://hosakannada.com/wp-content/uploads/2024/07/First.jpeg)
ಮೊನ್ನೆ ಏಪ್ರಿಲ್ 7ರಂದು ಬಿಸಿನೀರಿಗೆಂದು ಬೆಂಕಿ ಹಾಕಿದ್ದರು. ಬಿಸಿನೀರು ಕಾಯಿಸುವ ಒಲೆಯ ಪಕ್ಕದಲ್ಲೇ ತೆಂಗಿನ ಮಡಲು ಮತ್ತಿತರ ಉರುವರು ವಸ್ತುಗಳನ್ನು ಜೋಡಿಸಿಟ್ಟಿದ್ದರು. ಒಲೆಯಿಂದ ಹೊರಬಂದ ಬೆಂಕಿ, ಈ ಉರುವಳುಗಳಿಗೆ ತಗುಲಿ ಸ್ನಾನದ ಮನೆಯ ಮಾಡಿಗೆ ವ್ಯಾಪಿಸಿದೆ.
![](https://hosakannada.com/wp-content/uploads/2024/07/Middle.jpeg)
ಬೆಂಕಿ ತಗುಲಿದ ಸುದ್ದಿ ಕೇಳಿ ಬಂದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಪಂಚಾಯತ್ ಸದಸ್ಯ ಜಯಾನಂದ ಗೌಡ ಮತ್ತು ಗ್ರಾಮ ಕರಣಿಕ ನಾರಾಯಣ ಕುಲಾಲ್ ಅವರು ಆಗಮಿಸಿ ನಷ್ಟದ ಅಂದಾಜು ಮಾಡಿದ್ದಾರೆ.