ಸುಳ್ಯದಲ್ಲಿ ಸ್ವಂತ ಖರ್ಚಿನಲ್ಲಿ ದಿನ ಬಳಕೆ ವಸ್ತು ವಿತರಿಸಿದ ಜಾಹ್ನವಿ ಕಾಂಚೋಡು
![](https://hosakannada.com/wp-content/uploads/2020/04/IMG-20200406-WA0093-800x371.jpg)
ಜಿಲ್ಲೆಯಲ್ಲಿ ಕೊರೊನಾ ಕೇಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರಿದಿದ್ದು, ಬಡ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿವೆ. ಬಾಳಿಲದಲ್ಲಿ ಬಡ ಜನರ ಕಷ್ಟಕ್ಕೆ ಸ್ಪಂದಿಸಿದ ಸುಳ್ಯ ತಾಲೂಕು ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಐದು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ್ದಾರೆ.
![](https://hosakannada.com/wp-content/uploads/2024/07/First.jpeg)
ಕಳಂಜ ಪಂಚಾಯತ್ ವ್ಯಾಪ್ತಿಯಲ್ಲಿನ ಐದು ಬಡಕುಟುಂಬಗಳಿಗೆ 10 ಕೆಜಿ ಅಕ್ಕಿ, ಸಕ್ಕರೆ, ಚಾ ಪುಡಿ, ಬೆಲ್ಲ, ಮೆಣಸು, ತೊಗರಿಬೇಳೆ ಸೇರಿದಂತೆ ಅಗತ್ಯ ವಸ್ತುಗಳ ಕಿಟ್ಟನ್ನು ಸ್ವಂತ ಖರ್ಚಿನಲ್ಲಿ ವಿತರಿಸಿದರು.
![](https://hosakannada.com/wp-content/uploads/2024/07/Middle.jpeg)
ಸರಕಾರದ ಸಹಾಯ ಹಸ್ತ ಬರುತ್ತಿದ್ದರೂ, ಅದರ ಜತೆಗೆ ತಾವೇ ಸ್ವತಃ ವಿತರಿಸಿ ಸಹಾಯ ಹಸ್ತ ಚಾಚಿದ್ದಾರೆ.
![](https://hosakannada.com/wp-content/uploads/2020/04/IMG-20200406-WA0181.jpg)