” ಮುಸ್ಲಿಮರ ತಂಟೆಗೆ ಬಂದರೆ ಕೈ,ಕಾಲು ಗಂಟು ಮುರಿಯುತ್ತೇವೆ ” | ಅಕ್ಷಯ್ ರಜಪೂತ್ ಸಹಿತ 3 ಬಜರಂಗದಳ ಕಾರ್ಯಕರ್ತರಿಗೆ ಜೀವ ಬೆದರಿಕೆ
ಮಂಗಳೂರು : ವಿಟ್ಲದ ಬಜರಂಗದಳದ ಮೂವರು ಕಾರ್ಯಕರ್ತರಿಗೆ ಅಂತರಾಷ್ಟ್ರೀಯ ಕರೆಯ ಮೂಲಕ ಜೀವ ಬೆದರಿಕೆ ಒಡ್ಡಿದ ಘಟನೆಯ ಕುರಿತು ವಿಟ್ಲದಲ್ಲಿ ವರದಿಯಾಗಿದೆ.
![](https://hosakannada.com/wp-content/uploads/2024/07/First.jpeg)
ಬಜರಂಗದಳದ ಮುಖಂಡರಾದ ಅಕ್ಷಯ ರಜಪೂತ್, ಚರಣ್ ಕಾಪುಮಜಲು ಹಾಗೂ ಕಿರಣ್ ಕುಮಾರ್ ಎಂಬವರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಿರಣ್ ಕುಮಾರ್ ಎಂಬವರಿಗೆ ರಾತ್ರಿ ಅಂತರಾಷ್ಟ್ರೀಯ ಕರೆ ಮಾಡಿ ಬೆದರಿಕೆ ಕರೆ ಮಾಡಿರುವುದಾಗಿ ಆರೋಪಿಸಲಾಗಿದೆ.
![](https://hosakannada.com/wp-content/uploads/2024/07/Middle.jpeg)
ಘಟನೆಯ ವಿವರ ಏನು?
ಎ.4 ರಾತ್ರಿ ಸುಮಾರು 10 ಗಂಟೆಗೆ +6274657 ಎಂಬ ವಿದೇಶಿ ನಂಬರ್ ನಿಂದ ಬಜರಂಗದಳದ ಪ್ರಮುಖರಾದ ಕಿರಣ್ ಕುಮಾರ್ ಗೆ ಅಂತರಾಷ್ಟ್ರೀಯ ಕರೆಯೊಂದು ಬಂದಿತ್ತು. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದ.
“ನಿನಗೆ ಮುಸ್ಲಿಂ ರ ವಿಷಯ ಬೇಡ. ಒಂದು ವೇಳೆ ನೀನು ಮುಸ್ಲಿಂರ ವಿಷಯಕ್ಕೆ ಬಂದರೆ ಕೈ ಕಾಲು ಗಂಟು ಮುರಿದು ಜೀವ ತೆಗೆಯುತ್ತೇವೆ. ಈ ಬಗ್ಗೆ ಅಕ್ಷಯ್ ರಜಪೂತ್ ಹಾಗೂ ಚರಣ್ ಗೆ ತಿಳಿಸಿ. ಈ ಬಗ್ಗೆ ಪ್ರತ್ಯೇಕವಾಗಿ ಎಚ್ಚರಿಕೆ ಕೊಡುವುದಿಲ್ಲ. ಒಂದು ವೇಳೆ ಹಾರಾಟ ಜಾಸ್ತಿಯಾದರೆ, ನಮ್ಮ ಸುದ್ದಿಗೆ ಬಂದರೆ ಎಲ್ಲರನ್ನು ಶೂಟ್ ಮಾಡುತ್ತೇವೆ.”
-ಎಂಬ ಜೀವ ಬೆದರಿಕೆಯ ಕರೆ ಬಂದಿತ್ತು.
ತಕ್ಷಣ ಜೀವ ಬೆದರಿಕೆಯ ವಿಷಯವನ್ನು ಕಿರಣ್ ಕುಮಾರ್ ಅವರು ತನ್ನ ಗೆಳೆಯರಿಗೆ ತಿಳಿಸಿ ವಿಟ್ಲ ಠಾಣೆಗೆ ದೂರು ಸಲ್ಲಿಸಿದ್ದಾರೆ.