ಸುಬ್ರಹ್ಮಣ್ಯ: ತೆಂಗಿನಮರಕ್ಕೆ ವಿದ್ಯುತ್ ತಂತಿ ತಾಗಿ ಬೆಂಕಿ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿ ಇಂದು ಸಂಜೆ ಬೀಸಿದ ಗಾಳಿಗೆ ತೆಂಗಿನಮರವೊಂದಕ್ಕೆ ವಿದ್ಯುತ್ ತಂತಿ ತಾಗಿ ಬೆಂಕಿ ಹಿಡಿದ ಘಟನೆ ನಡೆದಿದೆ.
![](https://hosakannada.com/wp-content/uploads/2024/07/First.jpeg)
ಕುಕ್ಕೆ ಸುಬ್ರಹ್ಮಣ್ಯ ದಿಂದ ಆದಿ ಸುಬ್ರಹ್ಮಣ್ಯ ಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಇದ್ದ ತೆಂಗಿನಮರಕ್ಕೆ ಅದರ ಸಮೀಪದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯು ಗಾಳಿಗೆ ತೆಂಗಿನಗರಿಗೆ ತಾಗಿ ಬೆಂಕಿ ಹಿಡಿದು ಕೊಂಡಿದೆ.
![](https://hosakannada.com/wp-content/uploads/2024/07/Middle.jpeg)
ವಿದ್ಯುತ್ ತಂತಿಯಿಂದಾಗಿ ಬೆಂಕಿ ಹಿಡಿದುದರಿಂದ ನೀರು ಹಾಕಿ ಬೆಂಕಿ ನಂದಿಸುವುದು ಅಪಾಯಕಾರಿಯಾಗಿದ್ದರಿಂದ ಸ್ಥಳೀಯರು ಮೆಸ್ಕಾಂಗೆ ಮಾಹಿತಿ ನೀಡಿದರು.
ಆದರೆ ಬೆಂಕಿಯ ತೀವ್ರತೆಗೆ ತೆಂಗಿನ ಸಂಪೂರ್ಣ ಬೆಂದು ಹೋಗಿದೆ.