ಕೊರೋನಾ ಹಟಾವೋಗಾಗಿ ಉಜಿರೆಯ ಬಸ್ ಸ್ಟ್ಯಾಂಡಿನಲ್ಲಿ ಸ್ವತಃ ಕ್ಲೀನಿಂಗ್ ಗೆ ಇಳಿದ ಈ ಪ್ರಭಾವೀ ವ್ಯಕ್ತಿ ಯಾರು ? | Live Updates !

ಮುಂದೆ ಓದುವ ಮೊದಲು ಈ ಫೋಟೋದಲ್ಲಿರುವ ಮಾಸ್ಕ್ ಧರಿಸಿದ ವ್ಯಕ್ತಿಯನ್ನು ಗುರುತಿಸಿ.

ಕೊರೊನಾ ವೈರಸ್ ಸೋಂಕು ಹರಡುತ್ತಿರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಬೆಳ್ತಂಗಡಿಯ ವಿವಿಧ ಪೇಟೆಗಳನ್ನು ಸ್ಯಾನಿಟೈಸ್ ಮಾಡಬೇಕು ಎಂಬ ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದರು.
ಅದರಂತೆ ಉಜಿರೆಯ ಉದ್ಯಮಿಗಳಾದ ಲಕ್ಸ್ಮಿ ಗ್ರೂಪ್ಸ್ ನ ಶ್ರೀ ಮೋಹನ್ ಮತ್ತು ಸಂಧ್ಯಾ ಟ್ರೇಡರ್ಸಿನ ಶ್ರೀ ರಾಜೇಶ್ ಪೈ ಅವರ ” ಬದುಕು ಕಟ್ಟೋಣ ಬನ್ನಿ ” ಗುಂಪಿನ ಸ್ವಯಂಸೇವಕರ ಸಹಕಾರದೊಂದಿಗೆ ಸ್ಯಾನಿಟೈಸ್ ಮಾಡುವ ಕೆಲಸವನ್ನು ಸಾಂಕೇತಿಕವಾಗಿ ಆರಂಭಿಸಲಾಯಿತು.

ಈ ಚಿತ್ರದಲ್ಲಿರುವ, ಉಜಿರೆಯ ಬಸ್ ಸ್ಟ್ಯಾಂಡ್ ಮುಂಭಾಗವನ್ನು ಶುದ್ಧ ಗೊಳಿಸುತ್ತಿರುವ ಈ ಪ್ರಭಾವೀ ವ್ಯಕ್ತಿಯನ್ನು ನೀವು ಗುರುತಿಸಬಲ್ಲಿರಾ ?

ಅವರು ಬೆಳ್ತಂಗಡಿಯ ನಮ್ಮ ಹೆಮ್ಮೆಯ ಶಾಸಕ ಶ್ರೀ ಹರೀಶ್ ಪೂಂಜಾ ಅಲ್ಲದೆ ಬೇರೆ ಯಾರಿರಲು ಸಾಧ್ಯ? ಶಾಸಕರು ಸ್ವತಃ ನೀರಿನ ಪೈಪು ಹಿಡಿದು, ಪೊರಕೆ ಬಳಸಿ ಕ್ಲೀನ್ ಮಾಡುತ್ತಿದ್ದಾರೆ. ಲೈವ್ ಅಪ್ಡೇಟ್ಸ್ …ಕ್ಲೀನಿಂಗ್ ಅಂಡರ್ ಪ್ರೋಗ್ರೆಸ್…….

ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Leave A Reply

Your email address will not be published.