ತಮಿಳುನಾಡಿನ ನೂತನ ವಿಧಾನಸಭೆಯಲ್ಲಿ ಮೊದಲ ಬಾರಿ ಭಾಷಣ ಮಾಡಿದ ಅವಿಪಕ್ಷ ನಾಯಕ ಉದಯ ನಿಧಿ ಸ್ಟಾಲಿನ್ ಅವರು ಮತ್ತೆ ನಾಲಗೆ ಹರಿಬಿಟ್ಟಿದ್ದು ಸನಾತನ ಧರ್ಮವನ್ನು ನಾಶ ಮಾಡಿ ಎಂದು ಸಿಎಂ ವಿಜಯ್ ಜೋಸೆಫ್ ಅವರಿಗೆ ಮನವಿ ಮಾಡಿದ್ದಾರೆ. ಈ ವೇಳೆ ವಿಜಯ್ ಅವರು ಕೈಮುಗಿದು ಸುಮ್ಮನಾಗಿರುವುದು ಉದಯನಿಧಿ ಹೇಳಿಕೆಗೆ ಅವರು ಸಮ್ಮತಿ ಸೂಚಿಸಿದ್ದಾರೆ? ಎಂಬ ಚರ್ಚೆ ಜೋರಾಗಿದೆ.


ಹೌದು, ಉದಯನಿಧಿ ಸ್ಟಾಲಿನ್ ಅವರು “ತಮಿಳುನಾಡಿನಿಂದ ಸನಾತನ ಧರ್ಮವನ್ನು ನಾಶ ಮಾಡಬೇಕು” ಎಂಬ ತಮ್ಮ ಹಳೆಯ ನಿಲುವನ್ನು ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿ ಪುನರುಚ್ಚರಿಸಿದರು. ಆದರೆ, ಈ ವಿವಾದಾತ್ಮಕ ಹೇಳಿಕೆಗೆ ಮುಖ್ಯಮಂತ್ರಿ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ವಿಜಯ್ ಅವರ ಈ ಮೌನವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಒಂದು ವೇಳೆ ಉದಯನಿಧಿ ಅವರು ಬೇರೆ ಧರ್ಮಗಳ ವಿರುದ್ಧ ಇಂತಹ ಹೇಳಿಕೆ ನೀಡಿದ್ದರೆ ವಿಜಯ್ ಸುಮ್ಮನಿರುತ್ತಿದ್ದರೇ? ಅಲ್ಲದೆ ವಿಜಯ್ ಮತ್ತು ಸ್ಟಾಲಿನ್ ಅವರು ಇಬ್ಬರು ಒಂದೇ ಧರ್ಮದವರಾಗಿರುವ ಕಾರಣ ಉತ್ತರ ಧರ್ಮಗಳ ಬಗ್ಗೆ ಅಸಡ್ಡೆ ತೋರಿದರೇ? ಎಂದು ಹಲವಾರು ನಟ್ಟಿಗರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
