West Bengal : ಪಶ್ಚಿಮ ಬಂಗಾಳದ ಝಾರ್ಗ್ರಾಮ್ ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಂಡಕ್ಕಿ ಮಾರಾಟ ಮಾಡುವ ವಿಕ್ರಮ್ ಎಂಬಾತನ ಅಂಗಡಿಗೆ ಬಂದು 10 ರೂಪಾಯಿ ಮಂಡಕ್ಕಿಯನ್ನು ಕೊಂಡು ತಿಂದ ಘಟನೆ ದೇಶಾದ್ಯಂತ ವೈರಲ್ ಆಗಿತ್ತು. ವಿಕ್ರಂ ಕೂಡ ಈ ವಿಚಾರದಿಂದ ಬಾರಿ ಸಂತೋಷಪಟ್ಟಿದ್ದರು. ಆದರೆ ಇದೀಗ ಮೋದಿ ಅವರು ಮಂಡಕ್ಕಿ ತಿಂದು ಹೋದ ಬಳಿಕ ಆ ಒಂದು ವಿಚಾರದ ಬಗ್ಗೆ ಬಾರಿ ನೋವು ಕಾಡುತ್ತಿದೆಯಂತೆ.


ಪ್ರಧಾನಿ ಮೋದಿ ಅವರು ವಿಕ್ರಮ್ ಜೊತೆ ಸುಮಾರು 10 ನಿಮಿಷಗಳ ಕಾಲ ಆಪ್ತವಾಗಿ ಮಾತನಾಡಿದ್ದರು. ನೀವು ಈರುಳ್ಳಿ ತಿನ್ನುತ್ತೀರಾ ಎಂದು ವಿಕ್ರಮ್ ಕೇಳಿದಾಗ ಪ್ರಧಾನಿಗಳು ಸಾಮಾನ್ಯ ಗ್ರಾಹಕರಂತೆ ಉತ್ತರಿಸಿದ್ದಾರೆ. ವಿಕ್ರಮ್ ಮೂಲತಃ ಬಿಹಾರದ ಗಯಾ ಮೂಲದವರಾಗಿದ್ದು, ಬಡತನದ ಕಾರಣದಿಂದ ಕೇವಲ 9ನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾಯಿತು ಎಂದು ಪ್ರಧಾನಿ ಬಳಿ ನೋವು ಹಂಚಿಕೊಂಡಿದ್ದರು.
ಆದರೆ ಪ್ರಧಾನಿಗಳು ಹೋದ ನಂತರ ವಿಕ್ರಮ್ ಅವರಿಗೆ ಒಂದು ವಿಷಯದ ಬಗ್ಗೆ ತುಂಬಾ ಬೇಸರವಾಗಿದೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು ನಾನು ಒಂದು ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಜೊತೆ ಇಷ್ಟು ಹೊತ್ತು ಮಾತನಾಡಿದರೂ ಅವರಿಂದ ಒಂದು ಸಹಿ ಅಥವಾ ಆಟೋಗ್ರಾಫ್ ಪಡೆಯಲು ಮರೆತು ಹೋದೆ ಎಂಬುದು ಅವರ ಪಶ್ಚಾತ್ತಾಪವಾಗಿದೆ. ನಾವು ಒಂದು ತಪ್ಪು ಕೆಲಸ ಮಾಡಿದೆವು, ಅವರ ಸಹಿಯನ್ನು ಪಡೆಯಬೇಕಿತ್ತು ಎಂದು ವಿಕ್ರಮ್ ಹೇಳಿದ್ದಾರೆ.
