Home » ವಿದ್ಯಾರ್ಥಿರ್ಥಿಗಳಿಗೆ ಶಾಕ್ – ಫ್ರೀ ಬಸ್ ಪಾಸ್ ವಿಚಾರವಾಗಿ ಸರ್ಕಾರದಿಂದ ಬಂತು ಬ್ಯಾಡ್ ನ್ಯೂಸ್!!

ವಿದ್ಯಾರ್ಥಿರ್ಥಿಗಳಿಗೆ ಶಾಕ್ – ಫ್ರೀ ಬಸ್ ಪಾಸ್ ವಿಚಾರವಾಗಿ ಸರ್ಕಾರದಿಂದ ಬಂತು ಬ್ಯಾಡ್ ನ್ಯೂಸ್!!

0 comments

ನಾಡಿನ ನೂತನ ಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ  ಸುದ್ದಿಗೋಷ್ಠಿ ನಡೆಸಿ ರಾಜ್ಯದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಅನ್ನು ವಿತರಿಸಲಾಗುವುದು ಎಂದು ಘೋಷಣೆ ಹೊರಡಿಸಿದ್ದರು. ಆದರೆ ಈ ವಿಚಾರವಾಗಿ ಇದೀಗ ವಿದ್ಯಾರ್ಥಿಗಳಿಗೆ ಬ್ಯಾಡ್ ನ್ಯೂಸ್ ಎದುರಾಗಿದೆ.

ಹೌದು, ಡಿಕೆ ಶಿವಕುಮಾರ್ ಅವರ ಘೋಷಿಸಿದಂತೆ ಈ ತಿಂಗಳೆ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ ಅನ್ನು ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ  ಸದ್ಯ ಪಾಸ್ ವಿತರಣೆಯಾಗುವುದು ಮತ್ತಷ್ಟು ವಿಳಂಬವಾಗಲಿದ್ದು, ಈ ತಿಂಗಳು ಸಿಗೋದು ಡೌಟ್ ಎನ್ನಲಾಗುತ್ತಿದೆ.

ಸಾರಿಗೆ ಸಚಿವ ಬೈರತಿ ಸುರೇಶ್ (Byrathi Suresh) ಸಭೆ ಮಾಡಿ, ಬಸ್ ಪಾಸ್ ವಿತರಣೆ ಸಂಬಂಧ ಮಾಹಿತಿ ಪಡೆದಿದ್ದಾರೆ. ಖರ್ಚು ವೆಚ್ಚ ಮತ್ತು ಎಷ್ಟು ವಿದ್ಯಾರ್ಥಿಗಳಿಗೆ ನೀಡಬೇಕಾಗುತ್ತೆ ಅಂತಾ ಮಾಹಿತಿ ಪಡೆದಿದ್ದಾರೆ. ಬಳಿಕ ಮಾತನಾಡಿ, ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ ಉಚಿತ ಬಸ್ ಪಾಸ್ ಕೊಟ್ಟೆ ಕೊಡ್ತೇವೆ. ಕ್ಯಾಬಿನೆಟ್ ಮುಂದೆ ಇಡುತ್ತೇವೆ. ಅಷ್ಟು ಬಸ್ ಪಾಸ್ ಪ್ರಿಂಟ್ ಆಗಬೇಕು ಸಮಯ ತೆಗೆದುಕೊಳ್ಳುತ್ತೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಹೀಗಾಗಿ ಪಾಸ್ ವಿತರಣೆ ಇನ್ನೂ ಒಂದು ತಿಂಗಳು ತಡ ಆಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

You may also like