Home » ರಾಜ್ಯಪಾಲರು ಬರುತ್ತಾರೆಂದು ಗರ್ಭಿಣಿ ಇರುವ ಆಂಬುಲೆನ್ಸ್ ತಡೆದ ಪೊಲೀಸರು – ರಸ್ತೆ ಮಧ್ಯ ಕುಳಿತು ಪ್ರತಿಭಟನೆ ನಡೆಸಿದ ಗಂಡ

ರಾಜ್ಯಪಾಲರು ಬರುತ್ತಾರೆಂದು ಗರ್ಭಿಣಿ ಇರುವ ಆಂಬುಲೆನ್ಸ್ ತಡೆದ ಪೊಲೀಸರು – ರಸ್ತೆ ಮಧ್ಯ ಕುಳಿತು ಪ್ರತಿಭಟನೆ ನಡೆಸಿದ ಗಂಡ

0 comments

ರಾಜಕೀಯ VIP ಗಳು ಸಾರ್ವಜನಿಕರ ಸಂಚರಿಸುವ ರಸ್ತೆಯಲ್ಲಿ ಹಾಗೂ ಸಂಚರಿಸುವ ವೇಳೆ ಜೀರೋ ಟ್ರಾಫಿಕ್ ನಮ್ಮ ಭಾರತೀಯ ಕಾನೂನಿನಲ್ಲಿರುವ ಒಂದು ನಿಯಮ. ಸಮಯ ಸಂದರ್ಭಗಳನ್ನು ನೋಡದೆ, ಎಮರ್ಜೆನ್ಸಿ ಪ್ರಕರಣಗಳನ್ನು ಗಮನಿಸದೆ ಈ ವಿಐಪಿ ಗಳು ಬರುವಾಗ ಪೊಲೀಸರು ರಸ್ತೆ ತಡೆಯುವುದು ನಿಜಕ್ಕೂ ವಿಷಾದನೀಯ. ಇದೀಗ ಅಂತದ್ದೇ ಒಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

ನಗರದಲ್ಲಿ ರಾಜ್ಯಪಾಲರ ವಾಹನ ಸಂಚಾರದ (ಜೀರೋ ಟ್ರಾಫಿಕ್) ಹಿನ್ನೆಲೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದ್ದು, ಸುಮಾರು 30 ನಿಮಿಷಗಳ ಕಾಲ ವಾಹನ ಸವಾರರು ರಸ್ತೆಯಲ್ಲೇ ಸಿಲುಕುವಂತಾಯಿತು.  ಈ ಸಂಚಾರ ದಟ್ಟಣೆಯಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಿಲುಕಿಕೊಂಡು ಪರದಾಡಿದಂತಹವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸಾರ್ವಜನಿಕರ ಮನ ಕಲಕುದಿ. 

ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿರುವ ಇಂತಹ ತುರ್ತು ಸಂದರ್ಭಗಳಲ್ಲಿ, ಈ “ಜೀರೋ ಟ್ರಾಫಿಕ್” ಪ್ರೋಟೋಕಾಲ್ ಸಾಮಾನ್ಯ ಜನರ ಜೀವಕ್ಕೆ ಸಂಚಕಾರ ತರುತ್ತಿದೆಯೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವರದಿಗಳ ಪ್ರಕಾರ, ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಟ್ರಾಫಿಕ್​ಜಾಮ್​ನಲ್ಲಿ ಸಿಲುಕಿಕೊಂಡಿದ್ದರು. ಆದಾಗ್ಯೂ, ವಿಐಪಿ ಕಾರುಗಳು ಸುಗಮವಾಗಿ ಸಾಗಲಿ ಎಂಬ ಕಾರಣಕ್ಕೆ ಸಂಚಾರ ಪೊಲೀಸರು ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು. ಇದರಿಂದ ಕೋಪಗೊಂಡ ವ್ಯಕ್ತಿಯು ಕಾರಿನಿಂದ ಕೆಳಗಿಳಿದು ನೇರವಾಗಿ ಪೊಲೀಸರ ಬಳಿ ಆಗಮಿಸಿ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಬೇಕು. ಇಂತಹ ತುರ್ತು ಪರಿಸ್ಥಿತಿಯಲ್ಲೂ ರಸ್ತೆ ಬಂದ್ ಮಾಡಿದರೆ ನಾವೇನು ಮಾಡಬೇಕು ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

banner

ರಸ್ತೆ ಮಧ್ಯ ಕುಳಿತ ವ್ಯಕ್ತಿಯು “ರಾಜ್ಯಪಾಲರು ಇನ್ನೂ ಕೂಡ ಹೊರಟಿಲ್ಲ. ಆಂಬುಲೆನ್ಸ್ ಅನ್ನು ಹೋಗಲು ಬಿಡಿ. ಅದರಲ್ಲಿ ನನ್ನ ಗರ್ಭಿಣಿ ಹೆಂಡತಿ ಇದ್ದಾಳೆ. ಆಕೆಗೆ ಏನಾದರೂ ಆದರೆ ಯಾರು ಹೊಣೆ? ಎಂದು ಕೇಳಿಕೊಂಡರೂ ಕೂಡ ಪೊಲೀಸರು ಆಗುವುದಿಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿ ಆ ವ್ಯಕ್ತಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರು ಮಹಿಳೆಯೊಬ್ಬರನ್ನು ಎದುರಿಸಿದ ಕೆಲವು ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆದಾಗ್ಯೂ, ತನ್ನ ಮಗುವನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗುತ್ತಿದ್ದ ಮಹಿಳೆ, ಪ್ರತಿಭಟನೆಯಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಸಚಿವರ ಮೇಲೆ ತಮ್ಮ ಕೋಪವನ್ನು ಹೊರಹಾಕಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

You may also like