ದೇಶಾದ್ಯಂತ ಶ್ರೀಮಂತ ದೇವಾಲಯಗಳಲ್ಲಿ ಇರುವ ಚಿನ್ನವನ್ನು ಬಳಸಿಕೊಂಡು ಹಣ ಗಳಿಸಲು ಕೇಂದ್ರ ಸರ್ಕಾರವು ಯೋಜನೆಗಳನ್ನು ರೂಪಿಸಿದೆ ಎಂದು ಇತ್ತೀಚಿಗೆ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಇದೀಗ ಕೇಂದ್ರ ಸರ್ಕಾರದ ಸ್ಪಷ್ಟೀಕರಣ ನೀಡಿದೆ.


ದೇಶಾದ್ಯಂತ ದೇವಾಲಯ ಟ್ರಸ್ಟ್ಗಳು ಅಥವಾ ಯಾವುದೇ ಧಾರ್ಮಿಕ ಸಂಸ್ಥೆಗಳು ಹೊಂದಿರುವ ಚಿನ್ನದಿಂದ ಹಣಗಳಿಸುವ ಯೋಜನೆಯನ್ನು ಪ್ರಾರಂಭಿಸುವ ಯಾವುದೇ ಯೋಜನೆಗಳಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟೀಕರಣ ನೀಡಿದೆ. ಈ ವದಂತಿಗಳು ಸಂಪೂರ್ಣವಾಗಿ ಸುಳ್ಳು, ದಾರಿತಪ್ಪಿಸುವ ಮತ್ತು ಆಧಾರರಹಿತವಾಗಿವೆ ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ ದೇವಾಲಯದ ಗುಮ್ಮಟಗಳು, ಬಾಗಿಲುಗಳು ಅಥವಾ ಇತರ ರಚನೆಗಳ ಮೇಲೆ ಚಿನ್ನದ ಲೇಪನ ಮಾಡುವುದನ್ನು ಭಾರತದ ಕಾರ್ಯತಂತ್ರದ ಚಿನ್ನದ ನಿಕ್ಷೇಪಗಳ ಭಾಗವೆಂದು ಪರಿಗಣಿಸಲಾಗುತ್ತದೆ ಎಂಬ ಹೇಳಿಕೆಗಳನ್ನು ಸಚಿವಾಲಯ ತಿರಸ್ಕರಿಸಿದೆ. ಈ ಹೇಳಿಕೆಗಳನ್ನು ಸುಳ್ಳು ಮತ್ತು ಆಧಾರರಹಿತ ಎಂದೂ ಕೇಂದ್ರ ಹೇಳಿದೆ. ಅಲ್ಲದೆ ಜನರು ಅಧಿಕೃತ ಮಾರ್ಗಗಳ ಮೂಲಕ ಹೊರಡಿಸಲಾದ ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು ಎಂದು ಮನವಿ ಮಾಡಿದೆ.
