ಮೈಲಾರಿ ಹೋಟೆಲ್ ನಲ್ಲಿ ತಿಂಡಿ ತಿನ್ನುವದೆಂದರೆ ಸಿಎಂ ಸಿದ್ದರಾಮಯ್ಯನವರಿಗೆ ಬಲು ಪ್ರೀತಿ. ಇದೀಗ ಸಿದ್ದರಾಮಯ್ಯನವರನ್ನು ಅನುಕರಿಸಲು ಹೊಸ ಬಿಜೆಪಿ ಶಾಸಕರು ಬರುವ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ರೋಲ್ ಆಗುತ್ತಿದ್ದಾರೆ.


ಹೌದು, ಮೈಲಾರಿ ಹೋಟೆಲ್ನಲ್ಲಿ ದೋಸೆ ತಿಂದಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಶಾಸಕ ಬಿ. ಸುರೇಶ್ ಗೌಡ (Suresh Gowda ) ಸದ್ಯ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಕಾರಣ ಶಾಸಕರು ಹಾಕಿದ ಫೋಟೋವನ್ನು ಜೂಮ್ ಮಾಡಿ ನೋಡಿದಾಗ, ಅವರ ಎಲೆಯಲ್ಲಿ ಇದ್ದದ್ದು ದೋಸೆಯಲ್ಲ, ಬದಲಿಗೆ ಇಡ್ಲಿ ಎಂಬುದು ಬಹಿರಂಗವಾಗಿದೆ; ಇದರಿಂದಾಗಿ “ಇಡ್ಲಿ ತಿಂದು ದೋಸೆ ತಿಂದೆ ಎನ್ನುವುದು ಶತಮಾನದ ಸಾಧನೆ” ಎಂದು ಜನ ಸಾಮಾನ್ಯರು ಶಾಸಕರ ಕಾಲೆಳೆಯುತ್ತಿದ್ದಾರೆ.
ಅಲ್ಲದೆ ಇದೇ ಪೋಸ್ಟ್ ಅಡಿಯಲ್ಲಿ ರಾಜಕಾರಣಿಗಳ ತೋರ್ಪಡಿಕೆಯ ಶೋ-ಆಫ್ ವರ್ತನೆ, ವರ್ಷದಿಂದ ವರ್ಷಕ್ಕೆ ಶೇ. 60 ರಷ್ಟು ಹೆಚ್ಚಾಗುತ್ತಿರುವ ಭ್ರಷ್ಟಾಚಾರ ಹಾಗೂ ಸರ್ಕಾರಿ ಕಚೇರಿಗಳಲ್ಲಿ ತಾಂಡವವಾಡುತ್ತಿರುವ ಲಂಚಾವತಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
