2
ಬೆಳ್ತಂಗಡಿ ಠಾಣೆಯಲ್ಲಿ ಮುಂಬರುವ ಮುಸ್ಲಿಮರ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಮೇ.25 ರಂದು ನಡೆಯಿತು. ವಿವಿಧ ಮಸೀದಿಯ ಆಡಳಿತ ಸಮಿತಿಯ ಮುಖಂಡರು ಮತ್ತು ಪ್ರಮುಖರು ಬಾಗವಹಿಸಿದ್ದರು.


ವೃತ್ತ ನಿರೀಕ್ಷಕರಾದ ರವಿ ಬಿ.ಎಸ್. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಯುವಕರಿಗೆ ತಿಳಿಸುವಂತೆ ಮತ್ತು ಹಬ್ಬದ ಸಂದರ್ಭದಲ್ಲಿ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದರು. ಉಪನಿರೀಕ್ಷ ಆನಂದ್, ಸಿಖಂದರ್ ಪಾಷಾ ಸಹಾಯಕ ಉಪನಿರೀಕ್ಷಕ ಕುಶಾಲಪ್ಪಠಾಣಾ ಎಸ್ ಬಿ ಜಗದೀಶ್ ಹಾಜರಿದ್ದರು.
