Home » Dharmasthala : ಧರ್ಮಸ್ಥಳ ಪ್ರಕರಣ – ಅಖಾಡಕ್ಕಿಳಿದ ಮಹಿಳಾ ಆಯೋಗ!!

Dharmasthala : ಧರ್ಮಸ್ಥಳ ಪ್ರಕರಣ – ಅಖಾಡಕ್ಕಿಳಿದ ಮಹಿಳಾ ಆಯೋಗ!!

0 comments

Dharmasthala : ರಾಜ್ಯಾದ್ಯಂತ ಸಂಚಾಲನ ಸೃಷ್ಟಿಸಿದ್ದ ಧರ್ಮಸ್ಥಳ ಪ್ರಕರಣ ಇದೀಗ ತನಿಖೆಯ ಹಂತದಲ್ಲಿದೆ. ಗೃಹ ಸಚಿವರು ಈ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಆದರೆ ಇದೀಗ ಈ ವಿಚಾರವಾಗಿ ಮಹಿಳಾ ಆಯೋಗ ಅಖಾಡಕ್ಕಿಳಿದಿದೆ. 

ಯಸ್ ,ಧರ್ಮಸ್ಥಳ ಗ್ರಾಮದಿಂದ ಕಾಣೆಯಾಗಿದ್ದಾರೆ ಎಂದು ಹೇಳಲಾಗುವ ಯುವತಿಯರು ಮತ್ತು ಮಹಿಳೆಯರ ಬಗ್ಗೆ ಮಾಹಿತಿ ಸಿಗಲೇಬೇಕು. ಆ ನಿಟ್ಟಿನಲ್ಲಿ ತನಿಖೆ ಆಗಬೇಕು. ಎಸ್‌ಐಟಿ ಮುಖ್ಯಸ್ಥರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಹಲವು ಬಾರಿ ಸಭೆಗಳನ್ನೂ ನಡೆಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ. 

ಕಾಣೆಯಾದವರು ಎಲ್ಲಿಗೆ ಹೋದರು? ಸಾವಿಗೀಡಾಗಿದ್ದರೆ ಅದು ಸಂಭವಿಸಿದ್ದು ಹೇಗೆ ಇತ್ಯಾದಿ ವಿವರಗಳು ಬೇಕು.‌ ಇದು ಕಷ್ಟದ ಕೆಲಸ ನಿಜ. ಆದರೆ ಅಷ್ಟು ಮಾಹಿತಿ ತಿಳಿಯಲೇಬೇಕಾಗಿದೆ. ಅತ್ಯಾಚಾರಕ್ಕೆ ಪೋರ್ನೋಗ್ರಫಿ, ನಶೆ ಮತ್ತಿತರ ಕಾರಣಗಳೂ ಇವೆ. ಸ್ಮಾರ್ಟ್ ಫೋನ್‌ಗಳ ಬಳಕೆಯೂ‌ ಕೆಟ್ಟ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಈಚೆಗೆ ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯ ಪ್ರಕರಣ ಮತ್ತು ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಪೊಲೀಸರ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

You may also like