Home » ನೆಪೋಟಿಸಂ ಶುರುವಾಗಿದ್ದೇ ದೊಡ್ಮನೆಯಿಂದ, ರಾಜಕುಮಾರ್ ಮಕ್ಕಳಿಗೇಕೆ ಈ ಪ್ರಶ್ನೆ ಕೇಳಲಿಲ್ಲ – ಕಿಚ್ಚ ಸುದೀಪ್ ಖಡಕ್ ಮಾತು

ನೆಪೋಟಿಸಂ ಶುರುವಾಗಿದ್ದೇ ದೊಡ್ಮನೆಯಿಂದ, ರಾಜಕುಮಾರ್ ಮಕ್ಕಳಿಗೇಕೆ ಈ ಪ್ರಶ್ನೆ ಕೇಳಲಿಲ್ಲ – ಕಿಚ್ಚ ಸುದೀಪ್ ಖಡಕ್ ಮಾತು

0 comments

ಕಿಚ್ಚ ಸುದೀಪ್ ಅಕ್ಕನ ಮಗ, ಸೋದರಳಿಯ ಸಂಚಿತ್ ನಟಿಸಿರುವ ಮ್ಯಾಂಗೋ ಪಚ್ಚ ಕಳೆದ ಶುಕ್ರವಾರ ಬಿಡುಗಡೆಯಾಗಿ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ನೋಡಿದ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದುಕೊಳ್ಳುತ್ತಿದೆ. ಆದರೆ ಈಗ ಇದಕ್ಕೆ ನೆಪೋಟಿಸಮ್ ರೂಪ ನೀಡಲಾಗುತ್ತಿದೆ. ಇದಕ್ಕೆ ಸುದೀಪ್ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.

ಹೌದು, ಮ್ಯಾಂಗೋ ಚಿತ್ರ ಜನರಿಗೆ ಇಷ್ಟವಾದ ಕಾರಣ ಚಿತ್ರತಂಡ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ನಿನ್ನೆ ( ಜೂನ್ 6 ) ಹಮ್ಮಿಕೊಂಡಿತ್ತು. ಚಿತ್ರಕ್ಕೆ ಸುದೀಪ್ ಪತ್ನಿ ಸಹ ಬಂಡವಾಳ ಹಾಕಿದ್ದು, ಸುದೀಪ್ ಸಹ ಹಾಜರಿದ್ದರು. ಈ ವೇಳೆ ಪತ್ರಕರ್ತರೊಬ್ಬರು ನಿಮ್ಮಲ್ಲಿ ಟ್ಯಾಲೆಂಟ್ ಇದ್ದರೂ ಸಹ ಹಲವಾರು ಮಂದಿ ನಿಮ್ಮನ್ನು ನೆಪೋಟಿಸಂ ಹೆಸರಿನಲ್ಲಿ ಟ್ರೋಲ್ ಮಾಡುತ್ತಿದ್ದಾರೆ, ಮ್ಯಾಂಗೋ ಪಚ್ಚ ಎಂದರೆ, ಅರೇ ಏನಪ್ಪ ಸುದೀಪ್ ಮಗಳು, ಸುದೀಪ್ ಅಕ್ಕನ ಮಗ ಬರೀ ನೆಪೋಟಿಸಂ ಆಯ್ತು ಎನ್ನುತ್ತಿದ್ದಾರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಾರೆ. ಇದು ಸಹಜವಾಗಿ ಇದು ಸುದೀಪ್​ ಅವರನ್ನು ಕೆರಳಿಸಿದೆ.

ಈ ಪ್ರಶ್ನೆ ನನ್ನನ್ನು ಮಾತ್ರ ಯಾಕೆ ಕೇಳ್ತೀರಾ? ಇದೇ ಪ್ರಶ್ನೆಯನ್ನು ಶಿವರಾಜ್​ ಕುಮಾರ್​ ಅವರಿಗೂ ಕೇಳ್ತೀರಾ ಎಂದು ಪ್ರಶ್ನಿಸಿದ್ದಾರೆ. ನೆಪೋಟಿಸಂ ಅಣ್ಣಾವ್ರ ಕಾಲದಿಂದಲೇ ಶುರುವಾಗಿತ್ತಲ್ಲ. ಅವರಿಗೆ ಯಾಕೆ ಪ್ರಶ್ನೆ ಕೇಳಲ್ಲ. ರಾಜ್​ಕುಮಾರ್​ ಅವರ ಮಕ್ಕಳಿಗೂ ಕೇಳಬೇಕು, ಅಂಬಾನಿ ಅವರಿಗೂ ಕೇಳಬೇಕು. ನೀವು ಹಾಗೆ ಯಾಕೆ ಮಾಡಲ್ಲ ಎಂದ ಪ್ರಶ್ನಿಸಿದ್ದಾರೆ.

ಬಾಂಬೆಯಲ್ಲಿ ನೆಪೋಟಿಸಂ ಪದ ಹುಟ್ಟಿಕೊಂಡಿತು ಅಂತ ಕರ್ನಾಟಕಕ್ಕೂ ಅದನ್ನು ತರಬೇಡಿ. ನಮ್ಮಲ್ಲಿ ರಾಜ್‌ಕುಮಾರ್ ಕಾಲದಿಂದಲೇ ಕಲೆ ಒಲಿದು, ಯೋಗ್ಯತೆ ಇದ್ದು, ಕರ್ನಾಟಕದ ಜನತೆ ಅವರನ್ನು ಇಷ್ಟಪಟ್ಟರೆ ಇದು ಯಾರಪ್ಪನ ಜಾಗ ಬೇಕಾದರೂ ಆಗಬಹುದು. ಇಲ್ಲಿ ಕುಳಿತುಕೊಂಡು ಮುಂಬೈನ ಒಂದು ಪದವನ್ನು ಬಳಸುವುದು ತಪ್ಪಾಗುತ್ತೆ. ಇವತ್ತಿಗೆ ಶಿವರಾಜ್‌ಕುಮಾರ್ ಅವರು ಓರ್ವ ಮೇರುನಟರು, ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೇವೆ, ಅವರನ್ನು ನೋಡಿ ಎಷ್ಟೋ ಜನ ಬೆಳೆಯುತ್ತಿದ್ದಾರೆ. ನಮ್ಮ ಮಧ್ಯ ಅಪ್ಪು ಅವರು ನಮ್ಮ ಮಧ್ಯ ಅಪ್ಪು ಅವರು ಇರದೇ ಇರಬಹುದು, ಅದ್ಭುತವಾದ ಪ್ರತಿಭೆ. ನೆಪೋಟಿಸಂ ಎಂಬುದು ಅವರಿಗೆ ಬರಕೂಡದು. ಅವರಿಂದ ಎಷ್ಟೋ ಜನ ಕಲಾವಿದರು ಬೆಳೆಯುತ್ತಿದ್ದಾರೆ ಎಂದಿದ್ದಾರೆ.

banner

ಅಲ್ಲದೆ ನನ್ನ ಮನೆಯಲ್ಲಿ ಸಂಚಿತ್ ಬಿಟ್ಟು ಇನ್ನೂ ತುಂಬಾ ಜನ ಮಕ್ಕಳಿದ್ದಾರೆ, ಅವರು ಯಾರೂ ಚಿತ್ರರಂಗಕ್ಕೆ ಬಂದಿಲ್ಲ. ನನ್ನ ಮಗಳು ಚೆನ್ನಾಗಿ ಹಾಡು ಹೇಳ್ತಾಳೆ ಬಂದಿದ್ದಾಳೆ, ಇವನು ನಟನೆಯಲ್ಲಿ ಆಸಕ್ತಿ ಇದೆ ಬಂದಿದ್ದಾನೆ ಅಷ್ಟೇ. ನೆಪೋಟಿಸಂ ಎಂಬ ಪದ ನನಗೆ ಮೊದಲಿನಿಂದಲೂ ಆಗಲ್ಲ. ಆ ಪದದ ಅರ್ಥ ನಮ್ಮ ರಾಜ್ಯದಲ್ಲಿ ಎಷ್ಟೋ ಜನರಿಗೆ ಗೊತ್ತಿಲ್ಲ. ನಮ್ಮ ಕನ್ನಡಿಗರಿಗೆ ಗೊತ್ತಿರುವುದು ಒಂದೇ, ಕಲೆ. ಇದೆಯಾ ಬೆಳಿತಾರೆ ಅಷ್ಟೇ’ ಎಂದು ಹೇಳಿ ಪ್ರಶ್ನೆ ಕೇಳಿದವರು ಹಾಗೂ ನೆಪೋಟಿಸಂ ಎಂದು ಕಾಲೆಳೆಯುವವರಿಗೆ ಡೈರೆಕ್ಟ್ ಟಾಂಗ್ ಕೊಟ್ಟಿದ್ದಾರೆ.

You may also like