Home Breaking Entertainment News Kannada Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಮಿಡ್ ನೈಟ್ ಎಲಿಮಿನೇಷನ್ | ಮುಗಿಯಿತು...

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಮಿಡ್ ನೈಟ್ ಎಲಿಮಿನೇಷನ್ | ಮುಗಿಯಿತು ನಂಬರ್ ಆಟ, ಗುರೂಜಿ ಔಟ್!!!

Hindu neighbor gifts plot of land

Hindu neighbour gifts land to Muslim journalist

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟಗಳು ಜನರಿಗೆ ಕುತೂಹಲ ಮೂಡಿಸುತ್ತಾ ಮಂದೆನಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದೆ.

ಇದೀಗ, ಬಿಗ್ ಬಾಸ್ ಫಿನಾಲೆಗೆ 6ರಲ್ಲಿ ಐವರಿಗೆ ಮಾತ್ರ ಅವಕಾಶ ಇರುವುದರಿಂದ ಹೊರ ಹೋಗಿದ್ದು ಯಾರು ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ, ನಂಬರ್… ನಂಬರ್… ಎನ್ನುತ್ತಲೇ ನಂಬರ್ ಗೇಮ್‍ನಿಂದ ಆರ್ಯವರ್ಧನ್ ಗುರೂಜಿ ಹೊರಬಿದ್ದಿದ್ದಾರೆ.

ಪ್ರತಿ ಬಾರಿ ‘ಬಿಗ್ ಬಾಸ್’ ಫಿನಾಲೆ ವೇದಿಕೆ ಮೇಲೆ ಉಳಿಯುವುದು ಕೇವಲ 5 ಜನ ಮಾತ್ರ , ಹೀಗಾಗಿ ‘ಬಿಗ್ ಬಾಸ್’ ಮನೆಯಲ್ಲಿ ಇದ್ದ 6 ಜನರ ಪೈಕಿ ಒಬ್ಬರ ಹೊರಹೋಗುವುದು ಅನಿವಾರ್ಯವಾಗಿದ್ದು, ಸೋಮವಾರದ ಮಧ್ಯರಾತ್ರಿ ಎಲಿಮಿನೇಷನ್‍ನಲ್ಲಿ ಗುರೂಜಿ ಔಟ್ ಆಗಿದ್ದು, ದೊಡ್ಮನೆ ಆಟದಿಂದ ಹೊರ ಬಂದಿದ್ದಾರೆ.

ಸೋಮವಾರ ರಾತ್ರಿ ವಿಭಿನ್ನವಾಗಿ ಎಲಿಮಿನೇಷನ್ ನಡೆದಿದೆ. ನಂಬರ್ ಜೊತೆ ಕಾಣೆಯಾಗುವಂತಹ ಗೇಮ್ ‍ಪ್ಲ್ಯಾನ್ ಮಾಡಲಾಗಿತ್ತು. ನಂಬರ್ 9ರ ಜೊತೆ ಮುಳುಗುವ ಹಾಗೂ ಅದರೊಂದಿಗೆ ಮತ್ತೆ ಮರಳುವ ಪ್ಲಾನ್ ಮಾಡಲಾಗಿತ್ತು.. ‘ಬಿಗ್ ‘ಬಾಸ್’ ಮನೆಯಲ್ಲಿರುವ 6 ಜನರ ಪೈಕಿ ಯಾವ ಸ್ಪರ್ಧಿ ನಂಬರ್ ಜೊತೆ ವಾಪಸ್ ಬರುವುದಿಲ್ಲವೋ ಅವರು ಎಲಿಮಿನೇಟ್ ಎಂದು ಘೋಷಿಸುವುದಾಗಿ ಹೇಳಲಾಗಿತ್ತು.

ಹೀಗಾಗಿ ಆ ನಂಬರ್ ಜೊತೆ ಆರ್ಯವರ್ಧನ್ ಗುರೂಜಿ ಬಂದಿಲ್ಲ ಎನ್ನಲಾಗುತ್ತಿದೆ. ಆದರೆ ಈ ಎಲಿಮಿನೇಷನ್ ಪ್ರಕ್ರಿಯೆಯ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ ಎನ್ನಲಾಗಿದೆ.ಯಾವಾಗಲೂ ‘ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್’ ಎನ್ನುತ್ತಿದ್ದ ಆರ್ಯವರ್ದನ್ ಗುರೂಜಿ ಇದೀಗ ಅದೇ ನಂಬರ್ ಗೇಮ್ ಮೂಲಕ ಹೊರಬಿದ್ದಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಇದ್ದಷ್ಟು ದಿನವೂ ಜನಮನ ರಂಜಿಸುವಲ್ಲಿ ಯಶಸ್ವಿಯಾಗಿದ್ದ ಆರ್ಯವರ್ಧನ್ ಗುರೂಜಿ ಫೈನಲ್‍ ತಲುಪುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಗುರೂಜಿ ‘ಬಿಗ್ ಬಾಸ್’ ಮನೆಯಿಂದ ಹೊರಬಿದ್ದಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

‘ಬಿಗ್ ಬಾಸ್’ ದೊಡ್ಮನೆ ಆಟದಿಂದ ಆರ್ಯವರ್ಧನ್ ಗುರೂಜಿ ಔಟ್ ಆಗಿ ಹೊರ ಬಂದಿದ್ದಾರೆ. ಮಿಡ್‍ನೈಟ್‍ ಎಲಿಮಿನೇಷನ್‍ನಲ್ಲಿ ಗುರೂಜಿ ‘ಬಿಗ್ ಬಾಸ್’ ಮನೆಯಿಂದ ಔಟ್ ಆಗಿದ್ದು, ಯಾವಾಗಲೂ ‘ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್’ ಎನ್ನುತ್ತಿದ್ದ ಆರ್ಯವರ್ದನ್ ಗುರೂಜಿ ಇದೀಗ ಅದೇ ನಂಬರ್ ಗೇಮ್ ಮೂಲಕ ಹೊರಬಿದ್ದಿದ್ದಾರೆ.

ಎಲ್ಲರಿಗೂ ಭರ್ಜರಿ ಮನರಂಜನೆ ನೀಡುತ್ತಿದ್ದ ಗುರೂಜಿ ‘ಬಿಗ್ ಬಾಸ್’ ಮನೆಯಿಂದ ಹೊರಬಿದ್ದಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಹೇಗೆ ಬದುಕಬೇಕು ಎನ್ನುವುದನ್ನು ಬಿಗ್ ಬಾಸ್ ಮನೆ ನನಗೆ ಕಲಿಸಿದೆ ಎಂದು ಆರ್ಯವರ್ಧನ್ ಗುರೂಜಿ, ಕೆಳಗೆ ಹೋಗಿ ಆರ್ಯವರ್ಧನ್ ಗುರೂಜಿ ಮೇಲೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಈ ವಾರಾಂತ್ಯದ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‍ನಲ್ಲಿ ಆರ್ಯವರ್ಧನ್ ಗುರೂಜಿ ಉತ್ತಮ ಆಟ ಆಡಿದ್ದಕ್ಕೆ ಮೆಚ್ಚುಗೆಯ ಚಪ್ಪಾಳೆ ಪಡೆದುಕೊಂಡು ಬಿಟ್ಟಿದ್ದರು. ಈ ಕಾರಣದಿಂದ ಗುರೂಜಿ ಫಿನಾಲೆಗೆ ಎಂಟ್ರಿ ಕೊಡುತ್ತಾರೆ ಎಂದು ಹೆಚ್ಚಿನವರು ಊಹಿಸಿದ್ದರು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗಿದ್ದು, ಮಧ್ಯರಾತ್ರಿಯೇ ಗುರೂಜಿ ‘ಬಿಗ್ ಬಾಸ್’ ಮನೆಯಿಂದ ಸೂಟ್‍ ಕೇಸ್ ಜೊತೆಗೆ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ, ಗುರೂಜಿ ಮನೆಯಿಂದ ಹೊರ ಬಿದ್ದಿರುವ ಕುರಿತು ವೀಕ್ಷಕರ ನಡುವೆ ದೊಡ್ಡ ಮಟ್ಟದಲ್ಲೇ ಚರ್ಚೆ ನಡೆಯುತ್ತಿದ್ದು, ಆದರೆ ಈ ಬಗ್ಗೆ ಮಾಹಿತಿ ಮಾದ್ಯಮಗಳಾಗಲಿ ಇಲ್ಲವೇ ಗುರೂಜಿಯಾಗಲಿ ಗುಟ್ಟು ರಟ್ಟು ಮಾಡಿಲ್ಲ. ಆದರೂ ಕೂಡ ಗುರೂಜಿ ಮನೆಗೆ ವಾಪಸ್ಸಾಗಿರುವುದು ಫೈನಲ್ ವೇದಿಕೆಗೆ ಎಂಟ್ರಿ ಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.