Home News ಯುವಕನಿಗೆ ಚೂರಿಯಿಂದ ಇರಿದು ತಂಡ ಪರಾರಿ

ಯುವಕನಿಗೆ ಚೂರಿಯಿಂದ ಇರಿದು ತಂಡ ಪರಾರಿ

Hindu neighbor gifts plot of land

Hindu neighbour gifts land to Muslim journalist

ಕ್ಷುಲ್ಲಕ ವಿಚಾರಕ್ಕೆ ತಂಡವೊಂದು ವ್ಯಕ್ತಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಗುರುವಾರ ಸಂಜೆ ಮಂಗಳೂರಿನ ಬಲ್ಮಠ ಮೈದಾನ ಸಮೀಪ ವರದಿಯಾಗಿದೆ.

ಬಲ್ಮಠ ನಿವಾಸಿ ಝಯಾನ್ ರಿಶಾದ್ ಚೂರಿ ಇರಿತಕ್ಕೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಝಯಾನ್ ರಿಶಾದ್ ಎಂಬವರು ಸೆ.23ರಂದು ಸಂಜೆ 7 ಗಂಟೆ ಸುಮಾರಿಗೆ ತನ್ನ ಗೆಳೆಯರೊಂದಿಗೆ ಬಲ್ಮಠ ಆರ್ಯ ಸಮಾಜ ರಸ್ತೆಯಲ್ಲಿರುವ ಹೊಟೇಲ್‌ಗೆ ತೆರಳಿದ್ದರು. ಟೇಬಲ್ ನಲ್ಲಿ ಕುಳಿತು ಇನ್ನೊಂದು ಟೇಬಲ್‌ನ ಒಂದು ಖುರ್ಚಿಯನ್ನು ಅಲ್ಲಿರುವ ಗ್ರಾಹಕರ ಬಳಿ ಕೇಳಿ ತೆಗೆದುಕೊಂಡರು. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಹೊಟೇಲ್ ಹೊರಗೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ನಂತರ ಸಂಜೆ 7:30ರ ಹೊತ್ತಿಗೆ ‘ಮಾತನಾಡಿ ಸರಿ ಮಾಡುವಾ ಎಂದು ಬಲ್ಮಠ ಮೈದಾನ ಬಳಿಗೆ ರಿಶಾದ್ ಅವರನ್ನು ಕರೆಸಿದ ತಂಡವು ಅವಾಚ್ಯವಾಗಿ ನಿಂದಿಸಿ, ಚೂರಿಯಿಂದ ಇರಿಸಿದ್ದಾರೆ. ಅಲ್ಲದೆ, ಆರೋಪಿಗಳಿಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದರು

ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.