ಕುಶಾಲನಗರದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಸಜಿತಾ ಎಂಬ ಮಹಿಳೆ ಹಾಗೂ ಅವರ ಮಗ ನಾಪತ್ತೆಯಾಗಿದ್ದ ಪ್ರಕರಣ ದಾಖಲಾಗಿತ್ತು. ಈ ಕೇಸ್ಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಜಿತಾ ಹಾಗೂ ಆಕೆಯ ಮಗ ಕೇರಳಂನ ಮಲಪ್ಪುರಂ ಜಿಲ್ಲೆಯ ಮದರಸಾ ಒಂದರಲ್ಲಿ ಪತ್ತೆಯಾಗಿದ್ದಾರೆ. ಆಶ್ಚರ್ಯವೇನೆಂದರೆ ಅವರಿಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದು ಮಗನಿಗೆ ಸುನ್ನತ್ ಮಾಡಿಸಲಾಗಿದೆ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ.


ಹೌದು, ಸುಜಿತಾ ಹಾಗೂ ಮಗ ಇಬ್ಬರೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇನ್ನು ಆಕೆಯ ಮಗನಿಗೆ ಮುಸ್ಲಿಂ ಧರ್ಮದ ಪ್ರಕಾರ್ ಸುನ್ನತ್ ಕೂಡ ಮಾಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಆಕೆಯ ನಾಪತ್ತೆ ಕೇಸ್ಗೆ ಸಂಬಂಧಿಸಿದಂತೆ ಸಲೀಂ ಹಾಗೂ ಜಲೀಲ್ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಕಹಳೆ ನ್ಯೂಸ್ ವರದಿ ಮಾಡಿದೆ.
ಏನಿದು ಘಟನೆ?
ಸಜಿತಾ ಎಂಬ ಮಹಿಳೆ ಕೊಡಗಿನ ಕುಶಾಲನಗರದಿಂದ ಕಳೆದ ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ಗಂಡ, ಮಕ್ಕಳೊಂದಿಗೆ ಇದ್ದ ಸಜಿತಾ, ಕುಶಾಲನಗರ ಬಳಿಯ ನಿಸರ್ಗಧಾಮ ಟೂರಿಸ್ಟ್ ಸೆಂಟರ್ನ (ಎನ್ಸಿಟಿ) ಅಂಗಡಿಯೊಂದರಲ್ಲಿ ಸಚಿತಾ ಕೆಲಸ ಮಾಡುತ್ತಿದ್ದರು. 10 ವರ್ಷಗಳಿಂದ ಟೂರಿಸ್ಟ್ ಸೆಂಟರ್ನಲ್ಲಿ ಅಂಗಡಿ ನಡೆಸುತ್ತಿದ್ದ ಸಲೀಂ ಮಾಲೀಕತ್ವದ ಅಂಗಡಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಜಿತಾ ಕೆಲಸ ಮಾಡುತ್ತಿದ್ದರು. ಆದರೆ ಕೆಲ ದಿನಗಳ ನಂತರ ಅಂಗಡಿ ಮಾಲೀಕ ಸಲೀಂ ಸಂಪರ್ಕಕ್ಕೆ ಬಂದ ಬಳಿಕ ಸಜಿತಾ ಗಂಡನನ್ನು ಬಿಟ್ಟು 9 ವರ್ಷದ ಮಗನೊಂದಿಗೆ ಏಕಾಏಕಿ ನಾಪತ್ತೆಯಾಗಿದ್ದಳು.
ಎಲ್ಲೆಡೆ ಹುಡುಕಿದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಪತಿ ಹಾಗೂ ಕುಟುಂಬಸ್ಥರು ಆಕೆ ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕ ಸಲೀಂ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಹಿಂದೂಪರ ಸಂಘಟನೆಗಳ ಸಹಕಾರದೊಂದಿಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೊಲೀಸರು ಹಾಗೂ ಹಿಂದೂಪರ ಸಂಘಟನೆಗಳ ಹುಡುಕಾಟದ ವೇಳೆ ತಾಯಿ ಮತ್ತು ಮಗ ಕೇರಳಂ ರಾಜ್ಯದ ಮಣಪ್ಪುರಂ ಜಿಲ್ಲೆಯ ಮದರಸಾ ಒಂದರಲ್ಲಿ ಪತ್ತೆಯಾಗಿದ್ದಾರಂತೆ.
ಮುಸ್ಲಿಂ ಧರ್ಮಕ್ಕೆ ಮತಾಂತರ, ಮಗನಿಗೆ ಸುನ್ನತ್!
ಈ ವೇಳೆ ಸಜಿತಾ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿರೋದು ಗೊತ್ತಾಗಿದೆ. ಸಾಲದು ಎನ್ನುವಂತೆ ಆಕೆಯ 9 ವರ್ಷದ ಮಗನನ್ನೂ ಮುಸ್ಲಿಂ ಧರ್ಮದಂತೆ ಮತಾಂತರ ಮಾಡಿದ್ದು, ಮುಸ್ಲಿಂ ಧರ್ಮದಂತೆ ಆತನಿಗೆ ಸುನ್ನತ್ ಮಾಡಲಾಗಿದೆಯಂತೆ. ಇದು ಬಲವಂತದ ಮತಾಂತರ ಅಂತ ಸಜಿತಾ ಮನೆಯವರು ಆರೋಪಿಸಿದ್ದಾರೆ.
ಸಲೀಂ, ಜಲೀಲ್ ಎಂಬುವರು ಅರೆಸ್ಟ್
ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಂಗಡಿ ಮಾಲೀಕ ಸಲೀಂ ಹಾಗೂ ಜಲೀಲ್ ಎಂಬಾತನ್ನು ಬಂಧಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಟೂರಿಸ್ಟ್ ಸೆಂಟರ್ನಲ್ಲಿದ್ದ ಅಂಗಡಿಯನ್ನು ಮಾಲೀಕರು ಬಂದ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಜಿತಾಳನ್ನು ಸಲೀಮನೇ ಮರಳು ಮಾಡಿ, ಕೇರಳಕ್ಕೆ ಕಳಿಸಿ, ಮತಾಂತರ ಮಾಡಿಸಿದ್ದಾನೆ ಎಂದು ಆರೋಪಿಸವಾಗಿದೆ. ಇದೀಗ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
3 ವರ್ಷಗಳಿಂದ ಕೆಲಸ; ಪರಿಚಯವೇ ಪ್ರಕರಣಕ್ಕೆ ಕಾರಣ?
ಸಜಿತಾ, ಕಳೆದ 3 ವರ್ಷಗಳಿಂದ ಸಲೀಂ ಮಾಲೀಕತ್ವದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಸಲೀಂ ಕಳೆದ 10 ವರ್ಷಗಳಿಂದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಒಳಗೆ ಅಂಗಡಿ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ಸಜಿತಾ ಮೇಲೆ ಪ್ರಭಾವ ಬೀರಿದ ಸಲೀಂ, ಆಕೆಯನ್ನು ಮಗುವಿನೊಂದಿಗೆ ಕೇರಳಕ್ಕೆ ಕಳುಹಿಸಲು ಪ್ರಮುಖ ಪಾತ್ರ ವಹಿಸಿದ್ದಾನೆ. ಈ ಕುಕೃತ್ಯದಲ್ಲಿ ಜಲೀಲ್ ಎಂಬಾತ ಸಹಕರಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

