Home » ಉಜಿರೆ ಜನೌಷಧಿ ಕೇಂದ್ರದಲ್ಲಿ ಕಳ್ಳತನ; ರೂ.98 ಸಾವಿರ ನಗದು ಕಳವು

ಉಜಿರೆ ಜನೌಷಧಿ ಕೇಂದ್ರದಲ್ಲಿ ಕಳ್ಳತನ; ರೂ.98 ಸಾವಿರ ನಗದು ಕಳವು

0 comments
Crime

ಬೆಳ್ತಂಗಡಿ: ಉಜಿರೆ ಗ್ರಾಮದ ಬೆಳಾಲು ಕ್ರಾಸ್‌ ಬಳಿ ಇರುವ ಸುಪ್ರೀಮ್‌ ಲಾಡ್ಜ್‌ ಕೆಳಭಾಗದಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಕ್ಕೆ ಕಳ್ಳನೋರ್ವ ಒಳನುಗ್ಗಿ ಕ್ಯಾಶ್‌ ಡ್ರಾವರ್‌ನಲ್ಲಿದ್ದ 3 ದಿನದ ವ್ಯವಹಾರದ 98,460 ರೂ. ಹಣವನ್ನು ಕಳ್ಳತನ ಮಾಡಿರುವ ಕುರಿತು ವರದಿಯಾಗಿದೆ.

ಮೇ.29 ರಾತ್ರಿ 12.40 ರಿಂದ ಮೇ30 ರ ಬೆಳಗ್ಗೆ 8 ಗಂಟೆ ನಡುವೆ ಶಟರ್‌ ಬೀಗ ಮುರಿದು ಹಣ ಕದ್ದಿರುವ ಘಟನೆ ನಡೆದಿದೆ.

ಬೆಳ್ತಂಗಡಿ ಪೊಲೀಸರು, ಮಂಗಳೂರಿನಿಂದ ಶ್ವಾನದಳ, ಬೆರಳಚ್ಚು ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಜಿರೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮ್ಯಾನೇಜರ್‌ ಅನಿತಾ ಅವರು ಮೇ.30 ರಂದು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಅದರಂತೆ ಕಲಂ 305, 331(4) BNS ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮಾಡುತ್ತಿದ್ದಾರೆ.

 

banner

You may also like