3
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಈಶಾನ್ಯ ರಾಜ್ಯದ ಅಸ್ಸಾಂನ ಕಾಜಿರಂಗ ಲೋಕಸಭಾ ಕ್ಷೇತ್ರದ ಸಂಸದ ಕಾಮಾಖ್ಯ ಪ್ರಸಾದ ತಾಸಾ ಮತ್ತು ಪತ್ನಿ ಕಬಿತಾ ತಾಸಾ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


ಬಳಿಕ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿದರು. ಸುಬ್ರಮಣ್ಯದ ಆಕಾಶ್ ಮತ್ತು ಶ್ರೀ ಕುಮಾರ್ ಹಾಗೂ ಧರ್ಮಸ್ಥಳ ದೇವಲಯ ಕಚೇರಿಯ ಮಹೇಶ್ ದೇವರ ದರ್ಶನಕ್ಕೆ ಸಹಕರಿಸಿದರು.
