Home » ಹಿಂದೂ ಮಹಿಳೆಯ ಕಣ್ಣೀರು ಒರೆಸಲು ಸಚಿವೆ ಹೆಬ್ಬಾಳ್ಕರ್ ಬಳಿ ಬಂದ ಮುಸ್ಲಿಂ ನಾರಿಯರು – ಸೌಹಾರ್ದತೆಗೆ ಸಾಕ್ಷಿಯಾದ ಉಡುಪಿ

ಹಿಂದೂ ಮಹಿಳೆಯ ಕಣ್ಣೀರು ಒರೆಸಲು ಸಚಿವೆ ಹೆಬ್ಬಾಳ್ಕರ್ ಬಳಿ ಬಂದ ಮುಸ್ಲಿಂ ನಾರಿಯರು – ಸೌಹಾರ್ದತೆಗೆ ಸಾಕ್ಷಿಯಾದ ಉಡುಪಿ

0 comments

‘ಮಾನವ ಜಾತಿ ತಾನೊಂದೇ ವಲಂ’ ಎಂಬುವ ಆದಿಕವಿ ಪಂಪನ ನಿಲುವು. ಈ ನಿಲುವಿನೊಂದಿಗೆ ನಾವೆಲ್ಲರೂ ಬದುಕಬೇಕಾಗಿದ್ದರೂ ಜಾತಿ, ಧರ್ಮಗಳ ಸಂಘರ್ಷದಿಂದ ಇಂದು ಬೇರೆ ಬೇರೆಯಾಗಿ ಜೀವಿಸುತ್ತಿದ್ದೇವೆ. ಆದರೆ ಇದೆಲ್ಲದರ ನಡುವೆಯೂ ‘ಮಾನವೀಯತೆಯೊಂದೇ ಪರಮ ಧರ್ಮ’ ಎಂಬುದಕ್ಕೆ ಉಡುಪಿಯ ಬಡಗಬೆಟ್ಟು ಗ್ರಾಮದ ಮುಸ್ಲಿಂ ಮಹಿಳೆಯರು ಸಾಕ್ಷಿಯಾಗಿದ್ದಾರೆ.

ಯಸ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಳಿ ಸ್ವಂತ ಸೂರಿಲ್ಲದೆ ಪರದಾಡುತ್ತಿದ್ದ ಹಿಂದೂ ವೃದ್ಧೆಯೊಬ್ಬರ ಪರವಾಗಿ ಮುಸ್ಲಿಂ ಮಹಿಳೆಯರು ಧ್ವನಿಯೆತ್ತಿ, ನ್ಯಾಯಕ್ಕಾಗಿ ಬೇಡಿ ಕಣ್ಣೀರಿಟ್ಟ ಅಪರೂಪದ ಘಟನೆ ಉಡುಪಿಯಲ್ಲಿ ನಡೆದಿದೆ.

ಏನಿದು ಘಟನೆ?

ಬಡಗಬೆಟ್ಟು ಗ್ರಾಮದ ನಿವಾಸಿಯಾದ ಗಿರಿಜಾ ಶೆಟ್ಟಿಗಾರ್ ಎಂಬ ಬಡ ವಿಧವೆ ಮಹಿಳೆಗೆ 1989ರಲ್ಲೇ ನಿವೇಶನ ಯೋಜನೆಯಡಿ 5 ಸೆಂಟ್ಸ್ ಭೂಮಿ ಮಂಜೂರಾಗಿ ಹಕ್ಕು ಪತ್ರ ಸಿಕ್ಕಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಆ ಜಾಗವನ್ನು ‘ಡೀಮ್ಡ್ ಫಾರೆಸ್ಟ್’ (Deemed Forest) ಎಂದು ಸಬೂಬು ಹೇಳಿ ಮನೆ ನಿರ್ಮಿಸಲು ಅಡ್ಡಿಪಡಿಸುತ್ತಿದ್ದರು. ಇದರಿಂದಾಗಿ ಗಿರಿಜಾ ಅವರು ಹಲವು ವರ್ಷಗಳಿಂದ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲೇ ವಾಸಿಸುತ್ತಾ ಕಷ್ಟ ಅನುಭವಿಸುತ್ತಿದ್ದರು.

banner

ವೃದ್ಧೆಯ ಈ ಸುದೀರ್ಘ ನೋವನ್ನು ಕಂಡ ನೆರೆಮನೆಯ ಮುಸ್ಲಿಂ ಮಹಿಳೆಯರು, ಉಡುಪಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿಸಿ ಮನವಿ ಸಲ್ಲಿಸಿ ಭಾವುಕರಾಗಿ ಕಣ್ಣೀರು ಹಾಕಿದರು. ಹಿಂದೂ ಮಹಿಳೆಯ ಕಷ್ಟಕ್ಕೆ ಮುಸ್ಲಿಂ ಸಹೋದರಿಯರು ಕಣ್ಣೀರು ಹಾಕುತ್ತಿರುವುದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಭಾವುಕರಾದರು. ಅಲ್ಲದೆ ತಕ್ಷಣದ ಕ್ರಮಕ್ಕೆ ಸೂಚನೆ:ಕಷ್ಟದಲ್ಲಿರುವ ಗಿರಿಜಾ ಶೆಟ್ಟಿಗಾರ್ ಅವರಿಗೆ ಕಾನೂನುಬದ್ಧವಾಗಿ ಭೂಮಿಯ ವಾಸ್ತವ್ಯ ದೊರಕಿಸಿಕೊಟ್ಟು, ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ತಕ್ಷಣವೇ ಒದಗಿಸುವಂತೆ ಸಚಿವರು ಸ್ಥಳದಲ್ಲೇ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಳಿಕ “ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುವವರು ಸಮಾಜದಲ್ಲಿ ಗೋಡೆಗಳನ್ನು ಕಟ್ಟುತ್ತಿದ್ದರೆ, ಇಂತಹ ಸಾಮಾನ್ಯ ಜನರೇ ನಮ್ಮ ದೇಶದ ನಿಜವಾದ ಸೌಹಾರ್ದತೆಯ ರಾಯಭಾರಿಗಳು. ಇದು ನೋಡಿ ನಮ್ಮ ಹೆಮ್ಮೆಯ ಭಾರತ. ಇದನ್ನು ಉಡುಪಿ ಬಿಜೆಪಿಯವರು ಅರಿತುಕೊಳ್ಳಬೇಕು” ಎಂದು ಮಾರ್ಮಿಕವಾಗಿ ನುಡಿದರು.

You may also like