ಉತ್ತರ ಪ್ರದೇಶದಲ್ಲಿ ಕಳೆದ ಬುಧವಾರ ಸಂಭವಿಸಿದ ಭೀಕರ ಬಿರುಗಾಳಿ ಮತ್ತು ಮಳೆಯು ಸೃಷ್ಟಿಸಿದ ಅವಾಂತರಗಳು ಒಂದೆರಡಲ್ಲ. ಬರೇಲಿ ಜಿಲ್ಲೆಯಲ್ಲಿ ನಡೆದ ಒಂದು ಘಟನೆಯಂತೂ ಜನರನ್ನು ಬೆಚ್ಚಿಬೀಳಿಸಿದೆ.


ಹೌದು, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಬೀಸಿದ ಭೀಕರ ಚಂಡಮಾರುತಕ್ಕೆ ವ್ಯಕ್ತಿಯೊಬ್ಬ ತಗಡಿನ ಛಾವಣಿಯೊಂದಿಗೆ ಸುಮಾರು 50 ಅಡಿ ಎತ್ತರಕ್ಕೆ ಗಾಳಿಯಲ್ಲಿ ಹಾರಿದ ಆಘಾತಕಾರಿ ಘಟನೆ ನಡೆದಿದೆ. ಬಾಮಿಯಾನಾ ಗ್ರಾಮದ ಇ-ರಿಕ್ಷಾ ಚಾಲಕ ನಾನ್ಹೆ ಮಿಯಾನ್ (50) ಈ ಘಟನೆಯಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.
ಬಿರುಗಾಳಿ ಬೀಸುವಾಗ ನನ್ನೆ ಮಿಯಾನ್ ಅವರು ಮದುವೆ ಮಂಟಪವೊಂದರಲ್ಲಿ ತಗಡಿನ ಶೀಟ್ಗಳನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ, ಗಾಳಿಯ ವೇಗ ಎಷ್ಟಿತ್ತೆಂದರೆ ಆ ತಗಡಿನ ಶೆಡ್ ಅಪ್ಪಳಿಸಿ ವ್ಯಕ್ತಿಯ ಸಮೇತ ಗಾಳಿಯಲ್ಲಿ ಹಾರಿಹೋಗಿದೆ.ಸ್ವಲ್ಪ ದೂರದವರೆಗೆ ಗಾಳಿಯಲ್ಲಿ ತೇಲಿದ ಶೆಡ್ ಕೆಳಕ್ಕೆ ಬಿದ್ದರೆ, ನನ್ನೆ ಮಿಯಾನ್ ಅವರು ಮಾತ್ರ ಮತ್ತಷ್ಟು ದೂರದವರೆಗೆ ಹಾರಿಹೋಗಿ ಹೊಲವೊಂದರ ಮಧ್ಯೆ ಬಿದ್ದಿದ್ದಾರೆ.ಈ ಭೀಕರ ಘಟನೆಯಿಂದಾಗಿ ವ್ಯಕ್ತಿಯ ಕೈ ಮತ್ತು ಕಾಲುಗಳು ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಉತ್ತರಪ್ರದೇಶದಲ್ಲಿ ಸಂಭವಿಸಿದ ಈ ಹವಾಮಾನ ವೈಪರೀತ್ಯಕ್ಕೆ ಸುಮಾರು 100ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
https://x.com/i/status/2054588214023958933

