ಬೀದರ್ ಜಿಲ್ಲೆಯ ತಾಲ್ಲೂಕಿನ ಧನ್ನೂರು ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಹೆಬ್ಬಾವು ಒಂದು ಮಂಗದ ಮರಿ ನುಂಗಿರುವ ಘಟನೆ ನಡೆದಿದೆ.


ದೊಡ್ಡ ಗಾತ್ರದ ಹೆಬ್ಬಾವು ಮಂಗವೊಂದನ್ನು ಸುತ್ತಿಕೊಂಡಿತ್ತು. ಇದನ್ನು ಗಮನಿಸಿದ ಕುತೂಹಲಿಗ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು. ಗ್ರಾಮಸ್ಥರ ನೋಡುತ್ತಿದ್ದಂತೆ ಹಾವು ಮಂಗನನ್ನು ಅರ್ಧ ನುಂಗಿತ್ತು.
ಹೆಬ್ಬಾವು ನುಂಗಿ ಹಾಕಿದ ಪರಿಣಾಮ ಮಂಗ ಸ್ಥಳದಲ್ಲೇ ಸಾವನ್ನಪ್ಪಿದೆ. ಬಳಿಕ ಮಂಗ ಹಾಗೂ ಹೆಬ್ಬಾವು ಬೇರ್ಪಡಿಸಿದ ಉರಗ ತಜ್ಞ ಸುರೇಶ್ ಸುರಕ್ಷಿತವಾಗಿ ಹೆಬ್ಬಾವುವನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ.
