Home » ಪುತ್ತೂರು: ಮುಕ್ವೆಯಲ್ಲಿ ತಲವಾರು ಹಿಡಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ: ದೂರು, ಪ್ರತಿದೂರು ದಾಖಲು

ಪುತ್ತೂರು: ಮುಕ್ವೆಯಲ್ಲಿ ತಲವಾರು ಹಿಡಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ: ದೂರು, ಪ್ರತಿದೂರು ದಾಖಲು

0 comments
Crime

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಜಂಕ್ಷನ್‌ ಬಳಿ ತಲವಾರು ಹಿಡಿದು ವ್ಯಕ್ತಿಯೊಬ್ಬ ಜನರಿಗೆ ಭಯ ಹುಟ್ಟಿಸುವಂತ ವಾತಾವರಣವನ್ನು ಉಂಟು ಮಾಡಿದ್ದು, ಸ್ಥಳೀಯರು ಸೇರಿ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ಮತ್ತು ಪ್ರತಿದೂರುಗಳು ದಾಖಲಾಗಿರುವ ಕುರಿತು ವರದಿಯಾಗಿದೆ.

ಮಾ.6 ರಂದು ರಾತ್ರಿ ಮುಕ್ವೆ ಮಸೀದಿ ಬಳಿ ಇದ್ದ ನರಿಮೊಗರು ನಿವಾಸಿ ಮಹಮ್ಮದ್‌ ಸಿರಾಜುದ್ದೀನ್‌ ಅವರ ಬಳಿ ಬಂದ ಆರೋಪಿ ಅಬ್ದುಲ್‌ ರಹಿಮಾನ್‌ ಎನ್ನುವಾತ ಅಂದು ಸಂಜೆ ನಡೆದಿದ್ದ ಗಲಾಟೆ ಕುರಿತು ತಕರಾರು ತೆಗೆದಿದ್ದು, ಅಲ್ಲದೇ ತಲವಾರು ಹಿಡಿದು ಪ್ರದರ್ಶನ ಮಾಡುವ ಜನರಲ್ಲಿ ತೀವ್ರ ಆತಂಕ ಮೂಡಿಸಿದ್ದಾನೆ ಎನ್ನಲಾಗಿದೆ.

ಈ ಕುರಿತು ಸಿರಾಜುದ್ದೀನ್‌ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸರು ಅಬ್ದುಲ್‌ ರಹಿಮಾನ್‌ ವಿರುದ್ಧ ಬಿಎನ್‌ಎಸ್‌ ಕಾಯ್ದೆಯಡಿಯಲ್ಲಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇನ್ನೊಂದು ಕಡೆ, ತಲವಾರು ಹಿಡಿದ ವ್ಯಕ್ತಿ ಅಬ್ದುಲ್‌ ರಹಿಮಾನ್‌ ಮೇಲೆ ಸಾರ್ವಜನಿಕರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ಆತ ಗಾಯಗೊಂಡಿದ್ದು, ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಕುರಿತು ವರದಿಯಾಗಿದೆ.

banner

ಹಲ್ಲೆಗೆ ಸಂಬಂಧಪಟ್ಟಂತೆ ಅಬ್ದುಲ್‌ ರಹಿಮಾನ್‌ ಕೂಡಾ ಪ್ರತಿದೂರು ನೀಡಿದ್ದು, ʼತಾನು ಮುಕ್ವೆ ಜಂಕ್ಷನ್‌ ಬಳಿ ನಿಂತ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಪ್ರಜ್ಞೆ ತಪ್ಪುವಂತೆ ಹಲ್ಲೆ ಮಾಡಿದ್ದಾರೆʼ ಎಂದು ಹೇಳಿದ್ದಾನೆ.

ಈ ದೂರನ್ನು ಪೊಲೀಸರು ದಾಖಲು ಮಾಡಿದ್ದು, ತನಿಖೆ ಕೈಗೊಂಡಿದ್ದಾರೆ.

 

 

You may also like