ಒಡಿಶಾದ ರಾಯಗಡ ಜಿಲ್ಲೆಯ ಪಟನಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಿಪಾಸಿ ಗ್ರಾಮದಲ್ಲಿ ಮೃತ ಸಹೋದರಿಯ ಅಸ್ಥಿಪಂಜರವನ್ನು ಜಿತು ಅವರು ಬ್ಯಾಂಕ್ಗೆ ತಂದು ಪ್ರತಿಭಟನೆ ಮಾಡಿದ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಸೋಮವಾರ ಮಧ್ಯಾಹ್ನ ಈ ವಿಡಿಯೋ ವೈರಲ್ ಆಗಿತ್ತು. ಬ್ಯಾಂಕ್ ಅಧಿಕಾರಿಯ ವಿಚಾರಕ್ಕೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.


ಇದೀಗ ಆ ವ್ಯಕ್ತಿಗೆ 10 ಲಕ್ಷ ರೂ ದೇಣಿಗೆ ನೀಡುವುದಕ್ಕೆ ಖ್ಯಾತ ಶಿಕ್ಷಣ ತಜ್ಞ ಅಲಖ್ ಪಾಂಡೆ ಮುಂದೆ ಬಂದಿದ್ದಾರೆ. Physics Wallah (PW) ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ಅಲಖ್ ಪಾಂಡೆ ಅವರು, ಒಡಿಶಾದ ಕಿಯೋಂಜಾರ್ ಜಿಲ್ಲೆಯ ಬುಡಕಟ್ಟು ಜನಾಂಗದ ಜಿತು ಮುಂಡಾ ಅವರಿಗೆ ₹10 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
